Advertisement

ಸಿದ್ದರಾಮಯ್ಯ ವಿರುದ್ಧ ಅನರ್ಹ‌ ಶಾಸಕ‌ ಸುಧಾಕರ್ ಕಿಡಿ

08:24 AM Nov 02, 2019 | Team Udayavani |

ಚಿಕ್ಕಬಳ್ಳಾಪುರ: ಅನರ್ಹರ ಬಗ್ಗೆ ಕೆಲವರು ಕೇವಲವಾಗಿ ಮಾತನಾಡುತ್ತಿದ್ದಾರೆ. ರಾಜಕಾರಣಿಯು ಸೋಲು ಗೆಲುವು ಕಂಡಿದ್ದಾರೆ. ಸಿಎಂ ಆಗಿ ಸೋತಿದ್ದಾರೆ. ಮಂತ್ರಿಗಳಾಗಿ ಸೋತಿದ್ದಾರೆ. ಶಾಸಕರುಗಳಾಗಿ ಗೆದ್ದಿರುವವರು ರಾಜೀನಾಮೆ ಕೊಡಬೇಕು ಅಂದ್ರೆ ಸುಲಭದ ಮಾತಲ್ಲ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮೊದಲ ಬಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಗುಡುಗಿದ್ದಾರೆ.

Advertisement

ನಾಲ್ಕು ವರ್ಷ ಇದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದು ಸುಲಭದ ಮಾತಲ್ಲ ಎಂದು ಸಿದ್ದರಾಮಯ್ಯ ಗೆ ತಿರುಗೇಟು ನೀಡಿದ್ದಾರೆ.

ಅನರ್ಹ ಶಾಸಕರ ಕ್ಷೇತ್ರಗಳಿಗೆ ಅನುದಾನ ಹೆಚ್ಚಾಗಿ ಕೊಟ್ಟರೆ ತಪ್ಪೇನು? ಸಮ್ಮಿಶ್ರ ಸರ್ಕಾರದಲ್ಲಿ ನಿಮ್ಮ ಕೈಯಲ್ಲಿ ಕೊಡಿಸಲು ಆಗಲಿಲ್ಲ. ಅದಕ್ಕಾಗಿಯೇ ನಾವೆಲ್ಲ ಹೋರ ಹೋಗಿದ್ದು, ನಿಮ್ಮ ಪಕ್ಷದ ಶಾಸಕರ ಆತ್ಮಗೌರವ ಕಾಪಾಡುವಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಯಾವ ನೋವಿನಿಂದ ಶಾಸಕರು ಹೊರ ಹೋಗಿದ್ದಾರೆ ಅಂತಾ ನೀವು ಅರ್ಥ ಮಾಡಿಕೊಂಡಿಲ್ಲ. ಪ್ರತಿ ರಾಜಕಾರಣಿ ಸೋಲು ಗೆಲುವು ಕಂಡಿದ್ದಾರೆ.‌ಅನರ್ಹರ ಬಗ್ಗೆ ಹಗುರವಾಗಿ ಮಾತನಾಡೋದನ್ನ ಬಿಡಬೇಕು ಎಂದರು.

ಅನರ್ಹರ ಬಗ್ಗೆ ಬಹಳ ಕೇವಲವಾಗಿ ಕೆಲವರು ಮಾತನಾಡುತ್ತಿದ್ದಾರೆ. ಅದರ ವಿರುದ್ಧ ನಾವು ಸುಪ್ರೀಂಕೋರ್ಟ್ ಗೆ ಹೋಗಿದ್ದೇವೆ.ಮುಂದಿನ ವಾರ ತೀರ್ಪು ಬರಲಿದ್ದು, ಅನರ್ಹತೆ ಹಿಂದೆ ಇರೋವರು ಯಾರು ಅಂತಾ ರಾಜ್ಯದ ಜನರಿಗೆ ಗೊತ್ತಾಗಬೇಕಿದೆ. ಇದನ್ನು ನಾನೇ ಖುದ್ದಾಗಿ ಹೇಳುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next