Advertisement

ಡಾ.ಜೋತ್ಸ್ನಾ ಕಾಮತ್‌ ಗೆ ಪ್ರಶಸ್ತಿ

12:18 PM Jun 06, 2018 | Team Udayavani |

ಬೆಂಗಳೂರು: ಹಂಪಿನಗರದ ಚಿದಾನಂದ ಪ್ರಶಸ್ತಿ ಸಮಿತಿಯ 2018ನೇ ಸಾಲಿನ “ಚಿದಾನಂದ ಪ್ರಶಸ್ತಿ’ಗೆ ಹಿರಿಯ ಸಂಶೋಧಕಿ ಹಾಗೂ ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ಡಾ.ಜೋತ್ಸ್ನಾಕಾಮತ್‌ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫ‌ಲಕ ಹೊಂದಿದೆ.

Advertisement

ಜೂ. 17 ರಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಸಮಾರಂಭದಲ್ಲಿ ಡಾ. ಜೋತ್ಸ್ನಾಕಾಮತ್‌ ಅವರಿಗೆ ಡಾ.ಎಸ್‌. ನಾಗರಾಜು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ, ಕಳೆದ 25 ವರ್ಷಗಳಿಂದ ಖ್ಯಾತ ವಿದ್ವಾಂಸ‌ ಡಾ.ಎಂ.ಚಿದಾನಂದ ಮೂರ್ತಿ ಅವರ ಹೆಸರಿನಲ್ಲಿ ಸಂಶೋಧಕರಿಗೆ ಪ್ರಶಸ್ತಿ ನೀಡುತ್ತಾ ಬರುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next