Advertisement

ಜಾರಕಿಹೊಳಿಗೆ ಅವಾಚ್ಯ ನಿಂದನೆ; ಡಿಸಿಎಂ ಪರಂ ಬೆಂಬಲಿಗನ ಮೇಲೆ ಹಲ್ಲೆ

09:58 AM Apr 26, 2019 | Team Udayavani |

ತುಮಕೂರು: ಮಾಜಿ ಸಚಿವ, ಬಂಡಾಯ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ಅವರನ್ನು ಸಾಮಾಜಿಕ ತಾಣದಲ್ಲಿ ಅವಾಚ್ಯವಾಗಿ ನಿಂದಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಬೆಂಬಲಿಗನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

Advertisement

ಕಾಂಗ್ರೆಸ್‌ ಸಾಮಾಜಿಕ ತಾಣಗಳ ಇನ್‌ಚಾರ್ಜ್‌ ಆಗಿದ್ದ ದರ್ಶನ್‌ ಮೇಲೆ ಹಲ್ಲೆ ನಡೆಸಲಾಗಿದೆ.

ದರ್ಶನ್‌ ಅವರು ಫೇಸ್‌ಬುಕ್‌ನಲ್ಲಿ ರಮೇಶ್‌ ಜಾರಕಿಹೊಳಿ ಅವರನ್ನು ವೇಶ್ಯೆಗೆ ಹೋಲಿಕೆಮಾಡಿ ಅವಾಚ್ಯ ಶಬ್ಧ ಬಳಸಿದ್ದರು.

ಕಾಂಗ್ರೆಸ್‌ ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಜಾರಕಿಹೊಳಿ ಬೆಂಬಲಿಗರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next