Advertisement

ಸಿಎಲ್‌ಪಿಯಲ್ಲೇ ಸಿಎಂ ಅಭ್ಯರ್ಥಿ ತೀರ್ಮಾನ

06:20 AM May 14, 2018 | Team Udayavani |

ಬೆಂಗಳೂರು: “ದಲಿತ ಮುಖ್ಯಮಂತ್ರಿಗಾಗಿ ತಮ್ಮ ಸ್ಥಾನ ಬಿಟ್ಟುಕೊಡಲು ಸಿದ್ಧ’ಎಂಬ ಸಿಎಂ ಸಿದ್ದರಾಮಯ್ಯ ಅವರ
ಹೇಳಿಕೆಯನ್ನು ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, “ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗುತ್ತದೆ’ ಎಂದು ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಸಿಎಂಗಾಗಿ ಸ್ಥಾನ ಬಿಟ್ಟುಕೊಡುವುದಾಗಿ ಸಿದ್ದರಾಮಯ್ಯ ಹೇಳಿರುವುದನ್ನು ಸ್ವಾಗತಿಸುತ್ತೆ ನೆ. ಆದರೆ, ಯಾರೇ ಸಿಎಂ ಆಗಬೇಕಾದರೂ ಅದು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗಬೇಕು. ವೈಯಕ್ತಿಕ ಅಭಿಪ್ರಾಯ ಮುಖ್ಯವಾಗುವುದಿಲ್ಲ ಎಂದರು.

ಮತದಾನದ ಸಂದರ್ಭದಲ್ಲಿ ಪಕ್ಷದ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿ
ದೆ. ಯಾರ ಸಹಾಯವಿಲ್ಲದೆ ಸರ್ಕಾರ ರಚನೆ ಮಾಡುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಮಾತನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ ಬಗ್ಗೆ ಪ್ರತಿಕ್ರಿಯಿಸಿ, “ಅವರ ಆಸೆಗೆ ನಾನು ತಣ್ಣೀರೆರಚುವುದಿಲ್ಲ. ಆದರೆ, ಸ್ಪಷ್ಟ ಬಹುಮತ ಪಡೆಯುವವರು ನಾವೇ’ ಎಂದರು.

ದೇಶದಲ್ಲೇ ಅತಿ ಹೆಚ್ಚು ಉದ್ಯೋಗ ನೀಡುವ ರಾಜ್ಯ ನಮ್ಮದು. ಬೆಂಗಳೂರಿಗೆ ಡೈನಾಮಿಕ್‌ ಸಿಟಿ ಎಂದು ಬಿರುದು
ಬಂದಿದೆ. ಆದರೆ, ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೆಟ್ಟದಾಗಿ ಮಾತನಾಡಿ ಬೆಂಗಳೂರಿಗರಿಗೆ ಅವಮಾನ ಮಾಡಿದರು. ನಗರ ಹಾಳಾಗಿದೆ ಎನ್ನುವವರು ನಗರದ ಅಭಿವೃದ್ಧಿಗೆ 500 ಕೋಟಿ ರೂ.ಅನುದಾನ ನೀಡುತ್ತೇನೆಂದು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆವು ಎಂದರು.

ಈ ಚುನಾವಣೆಯಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳಿದ್ದೆವು. ಆದರೆ, ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡದೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಅವರ ಆರೋ ಪಕ್ಕೆ ಜನತೆ ಮತದಾನದ ಮೂಲಕ ಉತ್ತರ ನೀಡಿದ್ದು, ಅದು ಮಂಗಳ ವಾರ ಬಹಿರಂಗವಾಗಲಿದೆ ಎಂದರು. ರಾಹುಲ್‌ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಿದ ಪರಮೇಶ್ವರ್‌, ಈ ಚುನಾವಣೆಯಲ್ಲಿ ರಾಹುಲ್‌ ಗಾಂಧಿ 25 ದಿನ ಪ್ರಚಾರ ಮಾಡಿ 14 ಸಾವಿರ ಕಿ.ಮೀ. ಪ್ರವಾಸ ಮಾಡಿದ್ದರು. ಪಕ್ಷದ ತಳಮಟ್ಟದ ಕಾರ್ಯಕರ್ತರೂ ಚುನಾವಣೆಗೆ ಅವಿರತ ಕೆಲಸ ಮಾಡಿದ್ದು, ಅವರಿಗೂ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next