Advertisement

Politics : ಸಿಎಂ ಸಿದ್ದು ಧ್ವನಿ ಇಲ್ಲದಂತೆ ಇದ್ದಾರೆ: ಡಾ| ಅಶ್ವತ್ಥ ವ್ಯಂಗ್ಯ

08:10 PM Mar 21, 2024 | Team Udayavani |

ಮೈಸೂರು: ರಾಜ್ಯದಲ್ಲಿರುವುದು  ದುರ್ಬಲ ಸಿಎಂ ಹಾಗೂ ದುರ್ಬಲ ಪಾರ್ಟಿಯಾಗಿದ್ದು, ಸಿದ್ದರಾಮಯ್ಯ ಧ್ವನಿ ಇಲ್ಲದಂತಿದ್ದಾರೆ ಎಂದು ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದಾರೆ.

Advertisement

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಗುರುವಾರ ಭೇಡಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ  “ನಾನು ಸ್ಟ್ರಾಂಗ್‌ ಸಿಎಂ’ ಎಂಬ ಸಿದ್ದರಾಮಯ್ಯ ಹೇಳಿ ಕೆಗೆ ಪ್ರತಿಕ್ರಿಯಿಸಿ, ಬರೀ ಭ್ರಷ್ಟಾಚಾರ, ಲೂಟಿಯಷ್ಟೇ ಆ ಪಕ್ಷದಲ್ಲಿ ನಡೆಯುತ್ತಿದೆ. ಅವರ ಪಕ್ಷದವರೇ ನಾನು ಸಿಎಂ ಆಗುತ್ತೇನೆ, ಮಂತ್ರಿಯಾಗುತ್ತೇನೆ ಎಂಬ ಹೇಳಿಕೆ  ಕೊಡುತ್ತಿದ್ದು, ಸಿದ್ದರಾಮಯ್ಯ ಅವರಿಗೆ ನಿಯಂತ್ರಣ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು.

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯಲಿದ್ದು, ಪಕ್ಷದ ತೀರ್ಮಾನಕ್ಕೆ ತಾವು ಬದ್ಧ ಎಂದು ಸುಮಲತಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಒಗ್ಗಟ್ಟಿನ ಮಾತು ಹೇಳಿದ್ದು, 2-3 ಕ್ಷೇತ್ರದಲ್ಲಿ ಟಿಕೆಟ್‌ ಗೊಂದಲವಿದೆ. ಟಿಕೆಟ್‌ ಸಿಗದಿದ್ದಾಗ ನೋವು, ಬೇಸರವಾಗುವುದು ಸಹಜ, ಹಾಗೆಂದ ಮಾತ್ರಕ್ಕೆ ದುಡುಕಬಾರದು, ಪಕ್ಷ ತಾಯಿ ಇದ್ದಂತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next