Advertisement

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಕ್ಯಾಂಡಲ್ ಹೊತ್ತಿಸಿ ಸ್ಮರಣೆ

06:46 PM Dec 06, 2021 | Team Udayavani |

ಗಂಗಾವತಿ:  ಸಂವಿಧಾನಶಿಲ್ಪಿ ಸಮಸಮಾಜದ ಕನಸುಗಾರ ಬಾಬಾ ಸಾಹೇಬ್ ಡಾ. ಬಿ.ಆರ್.  ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ನಿಮಿತ್ಯ ನಗರದ ಕೋರ್ಟ್ ಎದುರುಗಡೆ ಇರುವ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಚಿಂತಕರು ಮತ್ತು ಸಾಹಿತಿಗಳ ನೇತೃತ್ವದಲ್ಲಿ ಕ್ಯಾಂಡಲ್ ಗಳನ್ನು ಹೊದಿಸಿ ಸ್ಮರಣೆ ಮಾಡಲಾಯಿತು .

Advertisement

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಜೆ ಭಾರದ್ವಾಜ್ ಮಾತನಾಡಿ,ಅಂಬೇಡ್ಕರ್ ಸಂವಿಧಾನವನ್ನು ದೇಶಕ್ಕೆ ನೀಡುವ ಮೂಲಕ ದೇಶದಲ್ಲಿ ಶೋಷಿತರು ದಲಿತರು ಹಿಂದುಳಿದವರು ಮತ್ತು ಮಹಿಳೆಯರಿಗೆ ಅಲ್ಪಸಂಖ್ಯಾತರಿಗೆ ತಮ್ಮ ಹಕ್ಕುಗಳನ್ನು ದೊರಕಿಸಿಕೊಟ್ಟಿದ್ದಾರೆ. ದೇಶ ವಿದೇಶಗಳಲ್ಲಿ ಅಂಬೇಡ್ಕರ್ ಅವರನ್ನು ಸ್ಮರಣೆ ಮಾಡುವ ಮೂಲಕ ಅವರ ಜ್ಞಾನವನ್ನು ಭರಿಸಲಾಗುತ್ತದೆ ಮತ್ತು ಅವರು ಸಂವಿಧಾನ ರಚನೆಯ ಸಂದರ್ಭದಲ್ಲಿ ಮಾಡಿದ ಕಾರ್ಯಗಳು ಎಲ್ಲಾ ಭಾರತೀಯರು ನಿತ್ಯವೂ ಸ್ಮರಿಸಬೇಕು. ಅಂಬೇಡ್ಕರ್ ಸಂವಿಧಾನವನ್ನು ರಚನೆ ಮಾಡುವ ಮೂಲಕ ಈ ದೇಶದ ಮೂಲನಿವಾಸಿಗಳ ಹಕ್ಕುಗಳನ್ನು ಮತ್ತು ದೇಶದ ಆಸ್ತಿಯಲ್ಲಿ ಎಲ್ಲರ ಪಾಲೂ ಇದೆ ಎಂದು ಮನವರಿಕೆ ಮಾಡಿದ್ದಾರೆ .ಪ್ರಸ್ತುತ ಇರುವ ಸರ್ಕಾರಗಳಿಗೆ ಸಂವಿಧಾನದ ಅದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ಆದ್ದರಿಂದ ಚುನಾವಣೆ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಈ ದೇಶವನ್ನ ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಹೋಗುವವರಿಗೆ ಬೆಂಬಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಡಾ. ರಾಜಶೇಖರ್ ನಾರಿನಾಳ,ರುದ್ರಮ್ಮ ಹಾಸಿನಾಳ ,ರಮೇಶ ಗಬ್ಬೂರ್, ಪತ್ರಕರ್ತ ಕೆ. ನಿಂಗಜ್ಜ ,ಶರಣಪ್ಪ  ಸಹಿದಾಬಾನು ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next