Advertisement

ಸಿನೆಮಾ ಮಾಡಲಿದ್ದಾರೆ ಡಾ|ಆಳ್ವರು! 

01:03 PM Nov 29, 2018 | Team Udayavani |

ಆಳ್ವಾಸ್‌ ನುಡಿಸಿರಿಯ ಮೂಲಕ ಕನ್ನಡ ನಾಡು-ನುಡಿಯ ವಿಚಾರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ|ಎಂ.ಮೋಹನ್‌ ಆಳ್ವರು ಸದ್ಯ ಎರಡು ಸಿನೆಮಾ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಸರಕಾರಿ ಶಾಲೆ ಎದುರಿಸುತ್ತಿರುವ ಇಂದಿನ ಸಮಸ್ಯೆಯ ಗಂಭೀರತೆ ಹಾಗೂ ಅದರಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ನೀತಿಪಾಠ ಹೇಳುವ ಕಥೆಯಾಧಾರಿತ ಒಂದು ಸಿನೆಮಾವಾದರೆ, ಇನ್ನೊಂದು ತುಳುನಾಡಿನ ಕೃಷಿ ಬದುಕನ್ನು ಕಟ್ಟಿಕೊಡುವ ನೆಲೆಯಲ್ಲಿ ಮೂಡಿಬರಲಿದೆ. 

Advertisement

ತುಳುನಾಡಿನಲ್ಲಿ ಹೆಕ್ಟೇರ್‌ಗಟ್ಟಲೆ ಗದ್ದೆಯಲ್ಲಿ ಕೃಷಿ ಮಾಡುತ್ತ, ಮನೆ ಮಂದಿಯೆಲ್ಲ ಅದರಲ್ಲಿಯೇ ತೊಡಗಿಸಿಕೊಳ್ಳುವ ಕಾಲವಿತ್ತು. ಆದರೆ, ಈಗ ಅಂತಹ ಗದ್ದೆಯ ಭೂಮಿ ಬರಡಾಗಿದೆ. ಕೃಷಿಯಿಂದ ಬಹುತೇಕ ಜನ ವಿಮುಖರಾಗಿದ್ದಾರೆ. ಕೃಷಿಯ ಮನೆಯ ಸೌಂದರ್ಯ ಮೂಲೆ ಸೇರಿದೆ. ಗದ್ದೆ ತೊರೆದ ಮನೆಯ ಮಕ್ಕಳು ಸಿಟಿಗೆ ಸೇರಿ ಹೈಫೈ ಜೀವನ ನಡೆಸುವಂತಾಗಿದೆ. ಇಂತಹ ಕಥೆಯೊಂದನ್ನು ಇಟ್ಟುಕೊಂಡು ಹೊಸ ಸಿನೆಮಾ ಮಾಡಬೇಕು ಎಂಬುದು ಡಾ|ಆಳ್ವರ ಯೋಚನೆಯಂತೆ. ತುಳುವಿನಲ್ಲಿಯೂ ಈ ಸಿನೆಮಾ ಮೂಡಿಬರಬೇಕು ಎಂಬ ತುಡಿತ ಅವರಲ್ಲಿದೆ. ಸಣ್ಣ ಬಜೆಟ್‌ನಲ್ಲಿ ಮಾಡುವ ಈ ಸಿನೆಮಾದ ಬಗ್ಗೆ ಡಾ|ನಾಗತಿಹಳ್ಳಿ ಚಂದ್ರಶೇಖರ್‌, ಡಾ|ಭಾರತಿ ವಿಷ್ಣುವರ್ಧನ್‌ ಅವರ ಬಳಿಯಲ್ಲಿಯೂ ಮಾತನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next