Advertisement

ಜಲ್ಲಿಕಲ್ಲಿಗೆ ಡಬಲ್ ರಾಯಲ್ಟಿ: ಆಕ್ರೋಶ

04:42 PM Dec 24, 2022 | Team Udayavani |

ಕಲಬುರಗಿ: ಕಲ್ಲುಗಣಿ ಪ್ರದೇಶದಿಂದ ಕಚ್ಚಾ ಕಲ್ಲುಗಳನ್ನು ತೆಗೆದು ಹಾಕುವಾಗ ಹಾಗೂ ಕಾಮಗಾರಿ ನಿರ್ವಹಿಸಿ ಬಿಲ್ ಪಾವತಿ ಮಾಡುವ ಸಂದರ್ಭದಲ್ಲೂ ರಾಜಧನ (ರಾಯಲ್ಟಿ) ಪಡೆಯುತ್ತಿರುವುದು ಸಂಪೂರ್ಣ ದ್ವಂದ್ವ ನಿಯಮವಾಗಿದೆಯಲ್ಲದೇ ಶೋಷಣೆಗೆ ದಾರಿದೀಪವಾಗಿದೆ ಎಂದು ಜಿಲ್ಲಾ ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಕಲ್ಲು ಗಣಿ ಪ್ರದೇಶದಿಂದ ಕಚ್ಚಾ ಕಲ್ಲುಗಳನ್ನು ತೆಗೆಯುವಾಗ ಸ್ಟೋನ್ ಕ್ರಶರ್ ಇಂಡಸ್ಟ್ರೀಸ್ ಮಾಲೀಕರಿಂದ ಹಾಗೂ ಕಾಮಗಾರಿ‌ ನಿರ್ವಹಿಸಿದ ನಂತರ ಇಲಾಖೆ ಬಿಲ್‌ ನಲ್ಲೂ ರಾಜ ಧನವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಗುತ್ತಿಗೆದಾರರಿಂದ ಪಡೆಯಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ನೀಲಕಂಠರಾವ ಮೂಲಗೆ ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಬಲ್ ರಾಯಲ್ಟಿ ಪಡೆಯುವುದನ್ನು ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.28ರಂದು ಬೆಳಗಾವಿ ಸುವರ್ಣಸೌಧ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಡಬಲ್ ರಾಯಲ್ಟಿ ಪಡೆಯುವುದನ್ನು ನಿಲ್ಲಿಸುವಂತೆ, ಈಗಾಗಲೇ ವಿಧಿಸಿರುವ ಐದು ಪಟ್ಟು ದಂಡವನ್ನು ವಿಲೇವಾರಿ ಮಾಡುವುದು, ಗಣಿ ಗುತ್ತಿಗೆ ಈಗಾಗಲೇ ಸಲ್ಲಿಸಲಾದ ಅರ್ಜಿಗಳ ಇತ್ಯರ್ಥಪಡಿಸಿ ಮಂಜೂರಾತಿ ನೀಡುವುದು ಪ್ರಮುಖ ಬೇಡಿಕೆಗಳಾಗಿದ್ದು, ಬೆಳಗಾವಿ ಚಲೋಗೆ ಜಿಲ್ಲೆಯಿಂದ 2 ಸಾವಿರಕ್ಕೂ ಅಧಿಕ ಕ್ರಷರ್ ಮಾಲೀಕರು ಹಾಗೂ ಗುತ್ತಿಗೆದಾರರು ಪಾಲ್ಗೊಳ್ಳಲಿದ್ದು, ರಾಜ್ಯದಿಂದ ಸುಮಾರ 40 ಸಾವಿರ ಜನ ಸೇರಿ ಪ್ರತಿಭಟನೆ ನಡೆಸಿ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದು ವಿವರಿಸಿದರು.

ಸರಕಾರಕ್ಕೆ ಈಗಾಗಲೇ ರಾಜಧನ ಸಂದಾಯವಾಗಿರುವುದರಿಂದ ಮತ್ತೆ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ಮುಂದಾಗಬಾರದು. ಪಟ್ಟಾ ಸ್ಥಳಗಳಲ್ಲಿ ಗಣಿಗುತ್ತಿಗೆ ಪಡೆಯುದಕ್ಕೆ ರಾಜಧನದಲ್ಲಿ ಮತ್ತು ಶುಲ್ಕಗಳಲ್ಲಿ ರಿಯಾತಿ ಕಲ್ಪಿಸಬೇಕು. ಗಣಿ ಗುತ್ತಿಗೆ ಈಗಾಗಲೇ ಅರ್ಜಿ ಸಲ್ಲಿಸಿ ಬಾಕಿ ಇರುವ ಅರ್ಜಿಗಳಿಗೆ ಮಂಜೂರಾತಿ ನೀಡಬೇಕು. ನಿಯಯ6(2)ರಲ್ಲಿ 100 ಮೀಟರ್‌ಗಳಿಗೆ ಮಿತಿಗೊಳಿಸಬೇಕು. ಈಗಾಗಲೇ ಕ್ರಷರ್ ಘಟಕ ಹೊಂದಿರುವವರಿಗೆ ಟೆಂಡರ್ ರಹಿತವಾಗಿ ಗಣಿ ಗುತ್ತಿಗೆ ಮಂಜೂರಾತಿ ಪಡೆಯಲು ಮೂರು ತಿಂಗಳ ಕಾಲಾವಕಾಶ ನಿಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Advertisement

ಗಣಿಗುತ್ತಿಗೆ ನೀಡಿರುವ ಪ್ರದೇಶಗಳ ಸುತ್ತ ಜಾಗದ ಲಭ್ಯವಿದ್ದಲ್ಲಿ 25 ಮೀಟರ್‌ಗಳವರೆಗೆ ಗಣಿಗುತ್ತಿಗೆ ಮಂಜೂರಾತಿಗೆ ಅವಕಾಶ ಕಲ್ಪಿಸಬೇಕು. 3ಎ ಪ್ರಕಾರ ಪಟ್ಟಾ ಸ್ಥಳಗಳಲ್ಲಿ ಕಲ್ಲುಗಳಲ್ಲಿ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡುವುದಕ್ಕೆ ಕಟ್ಟಡಕಲ್ಲನ್ನು ತೆಗೆಯುವುದಕ್ಕೆ ಅವಕಾಶ ನೀಡಬೇಕು. ಅರಣ್ಯ ಇಲಾಖೆಯಿಂದ ಎಫ್ಸಿ ಮುಖಾಂತರ ಟೆಂಡರ ರಹಿತವಾಗಿ ಗುಣಿಗುತ್ತಿಗೆ ಪಡೆಯುವುದಕ್ಕೆ ಅವಕಾಶ ನೀಡಬೇಕು. ಕಲ್ಲುಗಣಿಗುತ್ತಿಗೆ ಪರವಾನಿಗೆಯನ್ನು 50 ವರ್ಷಗಳವರೆಗೆ ವಿಸ್ತರಿಸಬೇಕು. ಈಗಾಗಲೇ ತಯಾರಿಸಿರುವ ಕ್ವಾರಿ ಪ್ಲಾನ್‌ಗಳನ್ನು ಹೊಸದಾಗಿ ತಯಾರಿಸಿ ಹೆಚ್ಚುವರಿ ಪ್ರಮಾಣದ ಖನಿಜ ತಗೆಯುವುದಕ್ಕೆ ಕ್ರಮ ವಹಿಸಬೇಕು ಎಂದು ಒತ್ತಾಯಸಿದರು.

ಸರ್ಕಾರದ ಧೋರಣೆ ವಿರೋಧಿಸಿ ಈಗಾಗಲೇ ಎಲ್ಲ ಸ್ಟೊನ್ ಕ್ರಶರ್ ಘಟಕಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಇಳಿಯಲಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯಲಾಗದು. ಜಲಿ ಕಲ್ಲು ಪೂರೈಕಯಾಗದಿದ್ದರೆ ಎಲ್ಲ ಅಭಿವೃದ್ಧಿ ಕಾರ್ಯಗಳು ನಿಲ್ಲುತ್ತವೆ. ಪರಿಸ್ಥಿತಿ ಕೈ ಮೀರುವ ಮುನ್ನಾ ಬೇಡಿಕೆಗಳಿವೆ ಸ್ಪಂದಿಸುವುದು ಸರಕಾರ ಪ್ರಮುಖ ಕಾರ್ಯವಾಗಿದೆ ಎಂದರು.

ಜಿಲ್ಲಾ ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್ ದ‌ ಪ್ರಧಾನ ಕಾರ್ಯದರ್ಶಿ ಆರ್.ಜಿ.ಪಾಟೀಲ್, ಕಾರ್ಯದರ್ಶಿ  ಮನೋಹರ್ ಗುತ್ತೇದಾರ್, ಖಜಾಂಚಿ‌ ರಾಕೇಶ ಗುತ್ತೇದಾರ್,  ಜಂಟಿ ಕಾರ್ಯದರ್ಶಿ ವಿಕಾಸ ಆರ್.‌ಪಾಟಕ್ (ಸೋನು ಪಟೇಲ್) ಹಾಗೂ ಮಲ್ಲಿನಾಥ ಹಾಗರಗಿ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next