Advertisement

ದೋಟಿಹಾಳ: ಪೋಷಣ್‌ ಅಭಿಯಾನ

02:17 PM Oct 22, 2019 | Suhan S |

ದೋಟಿಹಾಳ: ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಅಂಗನವಾಡಿ ಮೇಲ್ವಿಚಾರಕರಾದ ಭುವನೇಶ್ವರಿ ಸಂಕಾನಟ್ಟಿ ಹೇಳಿದರು.

Advertisement

ಗ್ರಾಮದ 3ನೇ ಅಂಗನವಾಡಿ ಕೇಂದ್ರದಲ್ಲಿ ಪೋಷಣ್‌ ಅಭಿಯಾನ ಮಾಸಾಚರಣೆ ನಿಮಿತ್ತ ನಡೆದ ದೋಟಿಹಾಳ ವಲಯಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಗರ್ಭಿಣಿಯರಿಗೆ ನೀಡಬೇಕಾದ ಸಂದೇಶ, ಆಹಾರ, ಆರೋಗ್ಯ ಹಾಗೂ ಪ್ರಾಥಮಿಕ ಆರೋಗ್ಯ ದಿನ ನೀಡಬೇಕಾದ ಪ್ರಮುಖ ಸಂದೇಶಗಳ ಕುರಿತು ಈ ಕಾರ್ಯಗಾರದಲ್ಲಿ ಚರ್ಚೆಸಲಾಯಿತು. ಈ ಕಾರ್ಯಗಾರವನ್ನು ಬಾಲವಿಕಾಸ ಸದಸ್ಯರಾದ ಹುಸೇನಬಿ ಕಡಿವಾಲ ಉದ್ಘಾಟಿಸಿದರು. ಈ ವೇಳೆ ಮೇಲ್ವಿಚಾರಕರಾದ ಭಾರತಿ ಸಜ್ಜಲ್‌, ದೋಟಿಹಾಳ ವೃತ್ತದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next