Advertisement

ದೋಟಿಹಾಳ: ಬೈಕ್ ಗೆ ಕಾರು ಡಿಕ್ಕಿ: ಸವಾರ ಮೃತ್ಯು

12:45 PM Dec 12, 2022 | Team Udayavani |

ದೋಟಿಹಾಳ: ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಸವಾರ ಸಾವನ್ನಪ್ಪಿದ ಘಟನೆ ಸೋಮವಾರ (ಡಿ.12) ಗ್ರಾಮದ ರಾ.ಹೆ. 53ರ ಕಲಿಕೇರಿ ಕ್ರಾಸ್ ಬಳಿ ನಡೆದಿದೆ.

Advertisement

ಜಾಲಿಹಾಳ ಗ್ರಾಮದ ಪರನಗೌಡ ಪಾಟೀಲ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ.

ಪರನಗೌಡ ಎಂಬವರು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಪಿಗ್ಮಿ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಎಂದಿನಂತೆ ಪಿಗ್ಮಿ ಸಂಗ್ರಹ ಮಾಡಲು ಹೋಗುತ್ತಿರುವ ವೇಳೆ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 53ರ ಕಲಿಕೇರಿ ಕ್ರಾಸ್ ಬಳಿ ಬೈಕ್ ಕ್ರಾಸ್ ಮಾಡುವ ವೇಳೆ ಇಲಕಲ್ ಕಡೆಯಿಂದ  ವೇಗವಾಗಿ ಬಂದ ಕಾರು ಬೈಕಿಗೆ ಅಪ್ಪಳಿಸಿದರಿಂದ ಅಪಘಾತ ಸಂಭವಿಸಿ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next