Advertisement

ದೋಟಿಹಾಳ: ಮಳೆ ಹಾಗೂ ಚರಂಡಿ ನೀರಿನಿಂದ ಸುತ್ತುವರೆದ ಮನೆಗೆ ಭೇಟಿ ನೀಡಿದ ಜಿ.ಪಂ. ಸಿಇಓ

12:01 PM Oct 16, 2022 | Team Udayavani |

ದೋಟಿಹಾಳ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿದ ಮಳೆಗೆ ಗೋತಗಿ ಗ್ರಾಮದ ಮನೆಯ ಸುತ್ತಮುತ್ತ ಚರಂಡಿ ನೀರು ಸುತ್ತುವರೆದು ಮಹಿಳೆಯರು ತಮ್ಮ ಮನೆಯ ಒಳಗೆ ಹೋಗಿ ಬರಲು ಹರಸಾಹಸ ಪಡುವಂತಾಗಿದೆ.  ಈ ಮನೆಯ ಮುಂದೆ ಸುಮಾರು ಮೂರು ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಹೀಗಾಗಿ ಮಹಿಳೆ ತನ್ನ ಮನೆಯ ಒಳಗೆ ಹೋಗಿ ಬರಲು ಹರಸಾಹಸ ಪಡುತ್ತಿದ್ದಳು.

Advertisement

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಹಿಸಿದ್ದ ಜಿಪಂ ಸಿಇಓ ಫೌಜಿಯಾ ತರುನ್ನಮ್ ಮಳೆ ಮತ್ತು ಚರಂಡಿ ನೀರಿನಿಂದ ನಡುಗದ್ದೆಯಾದ ರೇಣುಕಾ ಹರಿಜನ ಅವರ ಮನೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಕೂಡಲೇ ಜಿಪಂ, ತಾಪಂ ವಿಶೇಷ ಅನುದಾನದಲ್ಲಿ ಈ ಪ್ರದೇಶಕ್ಕೆ ಚರಂಡಿ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ತಾಪಂ ಇಓ ಶಿವಪ್ಪ ಸುಭೇದಾರ, ಪಿಡಿಓ ಪಂಪಣ್ಣ, ಶಂಕ್ರಪ್ಪ ಜುಮಲಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next