Advertisement

ಬಿಜೆಪಿಯನ್ನು ಮಣಿಸಲು ಮೈತ್ರಿಯೊಂದೇ ಅಸ್ತ್ರ : ಅಖಿಲೇಶ್ ಯಾದವ್

05:18 PM Aug 01, 2021 | Team Udayavani |

ಲಕ್ನೋ : ಉತ್ತರ ಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳು ಬಾಕಿ ಇರುವಾಗಲೇ, ರಾಜಕೀಯ ಲೆಕ್ಕಾಚಾರ ಶುರುವಾಗಿದೆ.

Advertisement

ಪ್ರಾದೇಶಿಕ ಪಕ್ಷಗಳು ಮೈತ್ರಿಗೆ ಮುಂದಾಗುವುದಾದರೇ ಯಾವಾಗ ಬೇಕಾದರೂ ಮಾತುಕತೆ ನಡೆಸಬಹುದು. ಸಮಾಜವಾದಿ ಪಕ್ಷ ಮೈತ್ರಿಗೆ ಎಂದಿಗೂ ತೆರೆದಿರುತ್ತದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ : ಸಚಿವ ಸಂಪುಟ ರಚನೆ ಕಸರತ್ತು: ದೆಹಲಿಗೆ ಹೊರಟ ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು. ಹಾಗಾಗಿ ಮೈತ್ರಿಯಾಗಿ ವಿಧಾನ ಸಭಾ ಚುನಾವಣೆಯನ್ನು ಎದುರಿಸಬೇಕಾದ ಅನಿವಾರ್ಯವಿದೆ ಎಂದಿದ್ದಾರೆ.

ಕಾಂಗ್ರೆಸ್ ಹಾಗೂ ಬಹುಜನ ಸಮಾಜವಾದಿ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಯಾದವ್, ಕಾಂಗ್ರೆಸ್ ಹಾಗೂ ಬಿ ಎಸ್ ಪಿ ಮೇಲಿಂದ ಮೇಲೆ ಸಮಾಜವಾದಿ ಪಕ್ಷದ ಮೇಲೆ ದಾಳಿ ನಡೆಸುತ್ತಿವೆ. ಅವರು ಯಾರ ವಿರುದ್ಧವಾಗಿ ಇದ್ದಾರೆ ಎನ್ನವುದನ್ನು ಸ್ಪಷ್ಟಪಡಿಸಬೇಕು. ಈ ಪಕ್ಷಗಳು ತಮ್ಮ ಹೋರಾಟ ಬಿಜೆಪಿ ಅಥವಾ ಎಸ್‌ಪಿ ಜೊತೆ ಎಂಬುದನ್ನು ನಿರ್ಧರಿಸಬೇಕು ಎಂದು ಗುಡುಗಿದ್ದಾರೆ.

Advertisement

ಚುನಾವಣಾ ಸಂಭಾವ್ಯ ಮೈತ್ರಿಯ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಸಮಾಜವಾದಿ ಪಕ್ಷದೊಂದಿಗೆ ಸಣ್ಣ ಪಕ್ಷಗಳು ಸೇರಿಕೊಂಡಿವೆ. ಬಿಜೆಪಿಯನ್ನು ಮತ್ತೆ ಉತ್ತರ ಪ್ರದೆಶದಲ್ಲಿ ಅಧಿಕಾರಕ್ಕೆ ಹಿಡಿಯುವುದಕ್ಕೆ ಅವಕಾಶ ಮಾಡಿಕೊಡಬಾರದು. ಹಾಗಾಗಿ ಮೈತ್ರಿಯೊಂದೇ ಸದ್ಯಕ್ಕಿರುವ ಅಸ್ತ್ರವೆಂದು ಹೇಳಿದ್ದಾರೆ.

ಇದನ್ನೂ ಓದಿ : ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ : ದಕ್ಷಿಣಕನ್ನಡ ಜಿಲ್ಲಾಧಿಕಾರಿಗೆ ಸಿಎಂ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next