Advertisement

ಉಪ್ಪಳ ರೈಲು ನಿಲ್ದಾಣ ಡಿ ಗ್ರೇಡ್‌ ಆಗುವ ಆತಂಕಬೇಡ: ಕೃಷ್ಣದಾಸ್‌

11:55 PM Oct 11, 2019 | Team Udayavani |

ಕುಂಬಳೆ: ಉಪ್ಪಳ ರೈಲು ನಿಲ್ದಾಣ ವನ್ನು ಡಿ ಗ್ರೇಡ್‌ ಮಾಡುವ ಪ್ರಚಾರ ಹರಿ ದಾಡಿ ಜನರಲ್ಲಿ ಆತಂಕ ಸೃಷ್ಟಿಸಿದ ರೈಲ್ವೇ ಇಲಾ ಖೆಯ ನಿಲುವಿನ ಕುರಿತು ಆತಂಕ ಬೇಡ ವೆಂಬುದಾಗಿ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ರೈಲ್ವೇ ಪಿಎಸಿ ಚೆಯರ್‌ಮನ್‌ ಪಿ.ಕೆ. ಕೃಷ್ಣದಾಸ್‌ ಅವರು ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಮತ್ತು ಪ್ರಯಾಣಿಕರಿಗೆ ಭರವಸೆ ನೀಡಿದರು.

Advertisement

ನಿಲ್ದಾಣ ಡಿ ಗ್ರೇಡ್‌ ಮಾಡುವುದಿಲ್ಲ. ಉಪ್ಪಳ ನಿಲ್ದಾಣದಲ್ಲಿ ಪ್ರಚಲಿತ ನಿಲುಗಡೆ ಇರುವ ಎಲ್ಲ ರೈಲುಗಳ ನಿಲುಗಡೆಯಲ್ಲಿ ಬದಲಾವಣೆ ಇಲ್ಲ. ನೌಕರರ ವರ್ಗಾವಣೆ ಇಲ್ಲವೆಂಬುದಾಗಿ ಉನ್ನತ ರೈಲ್ವೇ ಅಧಿಕಾರಿಗಳು ತನಗೆ ಭರವಸೆ ನೀಡಿರುವುದಾಗಿಯೂ, ಮಂಗಳೂರಿನಿಂದ ಕಣ್ಣೂರಿಗೆ ಹೊಸ ರೈಲು ಯಾನದ ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸುವುದಾಗಿ ಕೃಷ್ಣದಾಸ್‌ ಭರವಸೆ ನೀಡಿದರು. ಕೃಷ್ಣದಾಸ್‌ರವರು ಉಪ್ಪಳ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next