Advertisement

ಕ್ವಾರಂಟೈನ್‌ಗೆ ಲಾಡ್ಜ್ ಬಳಕೆ ಬೇಡ

08:19 AM May 12, 2020 | mahesh |

ಜಗಳೂರು: ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೇಯಾ ಕಂಪರ್ಟ್‌ ಲಾಡ್ಜ್ ಅನ್ನು ಕ್ವಾರಂಟೈನ್‌ಗೆ ಬಳಕೆ ಮಾಡಿಕೊಳ್ಳಬಾರದು ಎಂದು ನಾಗರಿಕರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಕ್ವಾರಂಟೈನ್‌ಗೆ ಲಾಡ್ಜ್ ಪಡೆಯಲಾಗುತ್ತದೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಸುತ್ತಮುತ್ತಲಿನ ನಾಗರಿಕರು ತಹಶೀಲ್ದಾರ್‌ ಕಚೇರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುರೆಡ್ಡೆಳ್ಳಿ ಶರಣಪ್ಪ, ಈ ಲಾಡ್ಜ್ ಪಟ್ಟಣದ ಹೃದಯ ಭಾಗದಲ್ಲಿದೆ. ಸುತ್ತಮುತ್ತ ಕಿರಾಣಿ ಅಂಗಡಿ, ಡಿಸಿಸಿ ಬ್ಯಾಂಕ್‌, ಶುದ್ಧ ಕುಡಿಯುವ ನೀರಿನ ಘಟಕ, ಪಿಎಲ್‌ಡಿ ಬ್ಯಾಂಕ್‌, ಶಾಲೆಗಳಿವೆ. ಹಾಗಾಗಿ ಶಂಕಿತ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲು ಲಾಡ್ಜ್ ಬಳಕೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಮಂಜುನಾಥ್‌, ಆನಂದ್‌ಕುಮಾರ್‌, ಸುರೇಶ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next