Advertisement

ಹಳಿ ದುರಸ್ತಿ ವೇಳೆ ರೈಲು ಪಾಸಾಗಲು ಬಿಡಬೇಡಿ: ಕಟ್ಟಪ್ಪಣೆ

07:24 PM Nov 14, 2017 | Team Udayavani |

ಹೊಸದಿಲ್ಲಿ : ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರಿಂದು ಅಧಿಕಾರಿಗಳಿಗೆ, ‘ಹಳಿ ದುರಸ್ತಿ ನಡೆಯುತ್ತಿರುವಾಗ ಯಾವ ರೈಲುಗಳನ್ನು ಕೂಡ ಹೋಗಲು ಬಿಡಬೇಡಿ; ನಾನು ಹೇಳಿದರೂ ಕೂಡ ನೀವು ಬಿಡಕೂಡದು; ಏಕೆಂದರೆ ಹಳಿ ನಿರ್ವಹಣೆ ಕಾರ್ಯ ಕೈಗೊಳ್ಳುವುದು ರೈಲು ಹಾಗೂ ರೈಲು ಪ್ರಯಾಣಿಕರ ಸುರಕ್ಷೆಗಾಗಿ ಎಂಬುದನ್ನು ನೆನಪಿಡಿ’ ಎಂದು ಕಟ್ಟಪ್ಪಣೆ ಕೊಡಿಸಿದರು. 

Advertisement

ರೈಲು ಹಳಿಯನ್ನು ಬದಲಾಯಿಸಿ ಹೊಸ ಹಳಿಗಳನ್ನು ಜೋಡಿಸುವುದು ಸುರಕ್ಷೆ ದೃಷ್ಟಿಯಿಂದ ಬಹಳ ಮುಖ್ಯ. ಹೊಸ ಹಳಿಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಸಲಾಗಿದ್ದು ಅವುಗಳನ್ನು ಬದಲಾಯಿಸುವ ಕೆಲಸ ನಡೆಯುತ್ತಿದೆ ಎಂದು ಗೋಯಲ್‌ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next