Advertisement

ನಕ್ಸಲರು ಪವಿತ್ರ ಆತ್ಮಗಳಲ್ಲ: ಪಿಣರಾಯಿ

09:44 AM Nov 05, 2019 | Team Udayavani |

ತಿರುವನಂತಪುರ: ‘ನಕ್ಸಲರು ಪವಿತ್ರ ಆತ್ಮಗಳಲ್ಲ ಅಥವಾ ಕುರಿ ಮರಿಗಳಲ್ಲ’. ಹೀಗೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಮಾತನಾಡಿದ ವಿಜಯನ್‌, ರಾಜ್ಯದಲ್ಲಿ ಶಂಕಿತ ನಕ್ಸಲರ ಹತ್ಯೆ ವಿರೋಧಿಸಿದ ವಿಪಕ್ಷಗಳಿಗೆ ಈ ರೀತಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಮೈತ್ರಿಕೂಟ ಮಾವೋವಾದಿಗಳನ್ನು ವೈಭವೀಕರಿಸುತ್ತಿದೆ.

Advertisement

ಛತ್ತೀಸ್‌ಗಡ ಮತ್ತು ಬಿಹಾರ ರಾಜ್ಯಗಳಲ್ಲಿ ಭದ್ರತಾ ಸಿಬಂದಿಯ ಮೇಲೆ ನಕ್ಸಲರು ದಾಳಿ ನಡೆಸಿದಂತೆ ಕೇರಳದಲ್ಲಿಯೂ ದಾಳಿ ನಡೆಸಬೇಕೆಂದು ನಕ್ಸಲರು ಬಯಸುತ್ತಿರುವಂತಿದೆ ಎಂದು ಹೇಳಿದ್ದಾರೆ. ಶಂಕಿತ ನಕ್ಸಲರ ಹತ್ಯೆ ಮತ್ತು ಮಾವೋವಾದದ ಮಾಹಿತಿ ಇರುವ ಭಿತ್ತಿಪತ್ರಗಳನ್ನು ಹಂಚುತ್ತಿದ್ದ ಆರೋಪದ ಮೇಲೆ ವಿದ್ಯಾರ್ಥಿಗಳನ್ನು ಬಂಧಿಸಿರುವುದನ್ನು ಕಾಂಗ್ರೆಸ್‌ ವಿರೋಧಿಸಿದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next