Advertisement

ಅರ್ಜಿ ತಡ: ವಿಮೆ ತಿರಸ್ಕರಿಸುವಂತಿಲ್ಲ!ಸರ್ವೋಚ್ಚ ನ್ಯಾಯಾಲಯ

01:10 AM Feb 12, 2022 | Team Udayavani |

ಹೊಸದಿಲ್ಲಿ: ಕಳ್ಳತನವಾದ ವಾಹನಕ್ಕೆ ಪರಿಹಾರ ನೀಡಿ ಎಂದು ವಿಮಾ ಕಂಪೆನಿಗೆ ಅರ್ಜಿ ಸಲ್ಲಿಸುವುದು ತುಸು ತಡವಾಗಿರ ಬಹುದು, ಹಾಗಂತ ಪರಿಹಾರ ನೀಡುವುದನ್ನು ತಿರಸ್ಕರಿಸುವಂತಿಲ್ಲ..

Advertisement

ಹೀಗೊಂದು ಮಹತ್ವದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ. ಐನಾ ನಿರ್ಮಾಣ ಕಂಪೆನಿಗೆ ಸೇರಿದ ಟ್ರಕ್‌ 2007, ನ.4ರಂದು ಕಳ್ಳತನವಾಗಿತ್ತು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ಕೂಡ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ದರೂ ಟ್ರಕ್‌ ಅನ್ನು ವಶಪಡಿಸಿಕೊಳ್ಳಲು ಆಗಲಿಲ್ಲ.

ಇದನ್ನೂ ಓದಿ:ಮೋದಿ, ನಿತೀಶ್ ಕುಮಾರ್​ಗೂ ಮಕ್ಕಳಾಗಲಿ ಎಂದು ದೇವರಲ್ಲಿ ಪಾರ್ಥಿಸುವೆ; ಲಾಲೂ ಪ್ರಸಾದ್ ಕಿಡಿ

ಈ ಹಿನ್ನೆಲೆಯಲ್ಲಿ ಐದು ತಿಂಗಳು ತಡವಾಗಿ ಐನಾ, ಓರಿಯೆಂಟಲ್‌ ವಿಮಾ ಕಂಪೆನಿಗೆ ವಿಮಾ ಮೊತ್ತ ನೀಡಿ ಎಂದು ಅರ್ಜಿ ಸಲ್ಲಿಸಿತ್ತು. ಆದರೆ ತಡವಾಗಿ ಅಷ್ಟು ತಿಂಗಳಾದ ಅನಂತರ ಅರ್ಜಿ ಸಲ್ಲಿಸಲಾಗಿದೆ ಎಂದ ಓರಿಯಂಟಲ್‌ ಪರಿಹಾರ ನೀಡಲು ತಿರಸ್ಕರಿಸಿತ್ತು. ಇದನ್ನು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗವೂ ಪುರಸ್ಕರಿಸಿತ್ತು. ಆದರೆ ಹೀಗೆ ಮಾಡಲು ಸರ್ವೋಚ್ಚ ಪೀಠ ಒಪ್ಪಿಲ್ಲ. ಅರ್ಜಿ ಸಲ್ಲಿಕೆ ತಡವಾಗಿದ್ದರೂ, ಕಳ್ಳತನ ಸತ್ಯವೇ ಆಗಿರು ವುದರಿಂದ ಪರಿಹಾರ ನೀಡಬೇಕೆಂದು ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next