Advertisement

ದಾನಿಗಳ ನೆರವಿನಿಂದ ಮನೆ ನಿರ್ಮಾಣಕ್ಕೆ ಅಡಿಗಲ್ಲು

10:00 AM Dec 14, 2018 | |

ಶಿರ್ವ: ಚಿಮಿಣಿ ದೀಪದ ಬೆಳಕಿನಲ್ಲಿ ಓದಿ ಸಾಧನೆಗೈದ ಸಾಧಕಿ ಅಕ್ಷಿತಾ ಹೆಗ್ಡೆ ಅವರಿಗೆ ಹೊಸ ಮನೆ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅಡಿಗಲ್ಲು ಹಾಕಲಾಯಿತು. 

Advertisement

ಶಿರ್ವ ಮಹಾಲಸಾ ನಾರಾಯಣೀ ದೇವಸ್ಥಾನದ ಅರ್ಚಕ ರಘುರಾಮ ಭಟ್‌ ಭೂಮಿ ಪೂಜೆ ನೆರವೇರಿಸಿದರೆ ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ಸುಧಾಕರ ಮಾರ್ಲ ಹಾಗೂ ಹಿರಿಯರಾದ ಜಿ. ವಸಂತ ಶೆಣೈ ಶಿಲಾನ್ಯಾಸ ನೆರವೇರಿಸಿದರು.

ಶಿರ್ವ ಬಂಟರ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಅಶೋಕ್‌ ಗೌಡ, ಆನಂದ ಅರಾನ್ಹಾ, ಲ| ಗ್ಯಾಬ್ರಿಯಲ್‌ ಮೆನೇಜಸ್‌, ಅಕ್ಷಿತಾ ಹೆಗ್ಡೆ ಮತ್ತವಳ ತಾಯಿ ಜಯಲಕ್ಷ್ಮೀ ಹೆಗ್ಡೆ ಉಪಸ್ಥಿತರಿದ್ದರು.
ಶಿರ್ವದ ದಾನಿಗಳು ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಬಳಿ ಜಾಗ ನೀಡಿದ್ದಾರೆ. ಕಾಲೇಜಿನ ಅಲುಮ್ನಿ ಎಸೋಸಿಯೇಶನ್‌ ಮುಂಬಯಿ ಮತ್ತು ಶಿರ್ವ ಬಂಟರ ಸಂಘ ಹಾಗೂ ಇತರ ದಾನಿಗಳ ಸಹಕಾರದೊಂದಿಗೆ ಸುಮಾರು 8 ಲ.ರೂ. ವೆಚ್ಚದಲ್ಲಿ 5 ತಿಂಗಳಲ್ಲಿ ಆರ್‌ಸಿಸಿ ಮನೆ ನಿರ್ಮಾಣಗೊಳ್ಳಲಿದೆ.

ಅಕ್ಷಿತಾ ಹೆಗ್ಡೆ ಕುರಿತು ಜು. 24ರಂದು “ಉದಯವಾಣಿ’ ವರದಿ ಪ್ರಕಟಿಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹಲವಾರು ಮಂದಿ ದಾನಿಗಳು ನೆರವಿನ ಭರವಸೆ ನೀಡಿದ್ದರು.

“ಉದಯವಾಣಿ’ ವರದಿಯಿಂದಾಗಿ ಹಲವಾರು ಮಂದಿ ದಾನಿಗಳು ನೆರವಿನ ಭರವಸೆ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಮನೆ ನಿರ್ಮಾಣಗೊಳ್ಳಲಿದ್ದು, ದಾನಿಗಳ ಕಾಳಜಿಗೆ ಆಭಾರಿಯಾಗಿದ್ದೇನೆ.
ಅಕ್ಷಿತಾ ಹೆಗ್ಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next