Advertisement

ಆರ್ಗಾನಿಕ್‌ ಆನಂದ್‌ ಶೆಟ್ಟಿ ತೋನ್ಸೆ ಅವರಿಂದ 10 ಲಕ್ಷ ರೂ. ದೇಣಿಗೆ

02:06 PM Sep 02, 2021 | Team Udayavani |

ಮುಂಬಯಿ: ಬಂಟರ ಸಂಘದ ಸಭಾಗೃಹದಲ್ಲಿ ಸೆ. 5ರಂದು ನಡೆಯಲಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಕ್ಕೆ ಆರ್ಗಾನಿಕ್‌ ಕೆಮಿಕಲ್ಸ್‌ ಪ್ರೈ. ಲಿ.ನ ಸಿಎಂಡಿ ಆನಂದ್‌ ಶೆಟ್ಟಿ ತೋನ್ಸೆ 10 ಲಕ್ಷ ರೂ. ಗಳ ದೇಣಿಗೆ ನೀಡಿದರು.

Advertisement

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಸೇವೆಯನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಯಶಸ್ವಿಯಾಗಿ ನಡೆಸಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಜನರ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವುದನ್ನು ಗಮನಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರು ಹಾಗೂ ಆರ್ಗಾನಿಕ್‌ ಕೆಮಿಕಲ್ಸ್‌ ಪ್ರೈ. ಲಿ. ಇದರ ಸಿಎಂಡಿ ಆನಂದ ಶೆಟ್ಟಿ ತೋನ್ಸೆ ಇವರು ಒಕ್ಕೂಟದ ಸಮಾಜ ಕಲ್ಯಾಣ ಕಾರ್ಯಕ್ರಮಕ್ಕೆ ಈ ವರೆಗೆ ಒಟ್ಟು 50 ಲಕ್ಷ ರೂ. ಗಳ ಮೊತ್ತದ ದೇಣಿಗೆಯೊಂದಿಗೆ ನಿಸ್ವಾರ್ಥ ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ:ಇನ್ಮುಂದೆ ಗೂಗಲ್ ನಲ್ಲಿಯೂ ಲಸಿಕೆ ಸ್ಲಾಟ್ ಬುಕ್ಕಿಂಗ್ ಆಯ್ಕೆ : ಕೇಂದ್ರ

ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿದ ಆನಂದ ಶೆಟ್ಟಿ ಅವರು ತನ್ನ ಹೃದಯಪೂರ್ವಕ ಕೊಡುಗೆ ನೀಡಿ ಒಕ್ಕೂಟದ ಸೇವಾಕಾರ್ಯ ವನ್ನು ಬಲಪಡಿಸಿದ್ದಾರೆ. ಸೆ. 5ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆಯಲಿರುವ ಜಾಗತಿಕ ಬಂಟರ ಒಕ್ಕೂಟದ ಬಹಿರಂಗ ಅಧಿವೇಶನ, ಸಾಧಕರ ಸಮ್ಮಾನ, ವೈವಿಧ್ಯಮಯ ಸಾಂಸ್ಕೃತಿಕ ಸಮಾರಂಭಕ್ಕೆ ಒಕ್ಕೂಟದ ಅಧ್ಯಕ್ಷರಾಗಿರುವ ಐಕಳ ಹರೀಶ್‌ ಶೆಟ್ಟಿ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ ಮತ್ತು ರತ್ನಾಕರ ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next