Advertisement

ಡೊಂಬಿವಲಿ ಕರ್ನಾಟಕ ಸಂಘ ಮಹಿಳಾ ವಿಭಾಗದಿಂದ ಭಾಷಣ ಸ್ಪರ್ಧೆ

05:34 PM Nov 23, 2018 | Team Udayavani |

ಡೊಂಬಿವಲಿ: ನಾವು ನಮ್ಮ ಯಾವುದೇ ಕಾರ್ಯಗಳನ್ನು ಮಾಡುವಾಗ ನಮ್ಮ ಸನಾತನ ಭಾರತೀಯ ಧರ್ಮ, ಸಂಸ್ಕೃತಿಗೆ ಧಕ್ಕೆ ಬಾರದಂತೆ  ಆತ್ಮಸಾಕ್ಷಿಯಾಗಿ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಮಾಡಿದ ಕಾರ್ಯಕ್ಕೆ ಪ್ರತಿಫಲ ಸಿಗಲು ಸಾಧ್ಯ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ನುಡಿದರು.

Advertisement

ನ. 21ರಂದು ಡೊಂಬಿವಲಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಸಂಘದ ಮುಖ್ಯಾಲಯದ ವಾಚನಾಲಯ ಸಭಾಗೃಹದಲ್ಲಿ ನಡೆದ ಭಾಷಣ ಸ್ಪರ್ಧೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಕಾನೂನು ಸಮರದಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದರೂ ಕಾನೂನಿನ ದುರುಪಯೋಗ ಮಾಡಿಕೊಳ್ಳದೆ ಪುರುಷ ಮತ್ತು ಸ್ತ್ರೀ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುವುದನ್ನು ಮರೆಯಬಾರದು. ಆದ್ದರಿಂದ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳುವ ಗುಣ ನಮ್ಮಲ್ಲಿರಬೇಕು. ಸಂಘದ ಮಹಿಳಾ ವಿಭಾಗದವರ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದರು.

ದುರುಪಯೋಗ ಸಲ್ಲ

ಭಾಷಣ ಸ್ಪರ್ಧೆಯ ವಿಜೇತರ ಹೆಸರು ಘೋಷಿಸಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಅವರು, ಕಾನೂನು ಸಮರದಲ್ಲಿ ಮಹಿಳೆಯರು ಮೇಲುಗೈ ಸಾಧಿಸುವುದು ಸ್ವಾಗತಾರ್ಹವಾದರೂ ಮಹಿಳೆಯರು ಇದನ್ನು ದುರುಪ ಯೋಗಪಡಿಸಿಕೊಂಡಾಗ ಅಪಾಯ ವಾಗುವ ಸಂಭವವಿದೆ. ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿದ್ದು ಸಾಮ ರಸ್ಯದ ಬಾಳು ಸಾಗಿಸುವುದೇ ನಿಜವಾದ ಪ್ರಗತಿಯ ಲಕ್ಷಣವಾಗಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಕಾನೂನು ಸಮರದಲ್ಲಿ ಇಂದು ಮಹಿಳೆಯರು ಮೇಲುಗೈ ಸಾಧಿಸುತ್ತಿರುವುದು ಪ್ರಗತಿಯ ಹೆಜ್ಜೆಯಾಗಿದೆಯೇ? ಎಂಬ ವಿಷಯದಲ್ಲಿ ಪರ ಮತ್ತು ವಿರುದ್ಧ ಭಾಷಣ ಭಾಷಣ ಸ್ಪರ್ಧೆ ನಡೆಯಿತು.  ಸ್ಪರ್ಧೆಯಲ್ಲಿ ಪದ್ಮಪ್ರಿಯಾ ಬಲ್ಲಾಳ್‌, ಡಿ. ಎ. ಸಾಲ್ಯಾನ್‌, ಸವಿತಾ ಪ್ರಭು, ಅಂಜಲಿ ತೋರಲಿ, ಅಶ್ವಿ‌ನ್‌ ಎಂ. ಜೆ. ಕಲಾ ಕಾಮತ್‌, ಜ್ಯೋತಿ ನಾಯಕ್‌, ಸಮತಾ ರೈ, ನಿಶಾ ಸುರೇಶ್‌ ಶೆಟ್ಟಿ, ಜಯಶ್ರೀ ಪರ್ವತಿಕರ ಮೊದಲಾದವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

Advertisement

ಭಾಷಣ ಸ್ಪರ್ಧೆಯಲ್ಲಿ  ನಿರ್ಣಾ ಯಕ ರಾಗಿ ನ್ಯಾಯವಾದಿ ನೂತನಾ ಹೆಗ್ಡೆ, ಕಲಾವಿದೆ ಪ್ರವೀಣಾ ಶೆಟ್ಟಿ, ಎಂ. ಆರ್‌. ಹೊಸಕೋಟಿ ಅವರು ಸಹಕರಿಸಿದ್ದು, ಅವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ ಅವರು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ನ್ಯಾಯವಾದಿ  ನೂತನ ಹೆಗ್ಡೆ ಅವರು, ಇಂತಹ ಚರ್ಚಾ ಸ್ಪರ್ಧೆಗಳಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಕಾನೂನು ಸಮರದ ಮಹಿಳೆಯರ ಗೆಲುವು ಅಭಿವೃದ್ಧಿಗೆ ತೊಡಕಾಗುವುದಿಲ್ಲ. ಆದರೆ ಶಬರಿ ಮಲೆ ಪ್ರವೇಶದ ವಿಷಯದಲ್ಲಿ ಧಾರ್ಮಿಕ ನಿಲುವಿನಿಂದ ನೋವಾ ಗಿದೆ. ಡೊಂಬಿವಲಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ ನೇತೃತ್ವದ ಕಾರ್ಯ ಅಭಿನಂದನೀಯ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ನುಡಿದರು.

ಪ್ರವೀಣಾ ಹೊಸಕೋಟಿ ಅವರು ಮಾತನಾಡಿ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ವಿಭಾಗವು ಪ್ರತೀ ವರ್ಷ ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪರಿಸರದ ಮಹಿಳೆಯರು ಸಂಘದೊಂದಿಗೆ ಸಂಪರ್ಕವನ್ನು ಹೊಂದುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿದ್ದು, ಮಹಿಳೆಯರು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಎಂದು ನುಡಿದು ಸ್ಪರ್ಧಿ ಗಳನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ, ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ, ಗೌರವ ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌, ಕೋಶಾಧಿಕಾರಿ ಲೋಕ ನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಸುಷ್ಮಾ ಡಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಆಶಾ ಶೆಟ್ಟಿ, ಯೋಗಿನಿ ಶೆಟ್ಟಿ, ವಿದ್ಯಾ ಆಲಗೂರ, ಗೀತಾ ಮಂದನ್ನ ಉಪಸ್ಥಿತರಿದ್ದರು.

ಸಂಘದ ಪದಾಧಿಕಾರಿಗಳಾದ ಪ್ರಭಾಕರ ಶೆಟ್ಟಿ, ಎಸ್‌. ಎನ್‌. ಸೋಮಾ, ಸಮಾಜ ಸೇವಕ ಆರ್‌. ಬಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯದರ್ಶಿ ಮಾಧುರಿಕಾ ಬಂಗೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. 

ಆಶಾ ಶೆಟ್ಟಿ, ವಿದ್ಯಾವತಿ ಆಲಗೂರ ಅವರು ಅತಿಥಿಗಳನ್ನು ಪರಿಚಯಿಸಿದರು. 
ವಸಂತ ಸುವರ್ಣ, ಸನತ್‌ ಕುಮಾರ್‌ ಜೈನ್‌, ಗೀತಾ ಕೋಟೆಕಾರ್‌, ಚಂಚಲಾ ಸಾಲ್ಯಾನ್‌ ಅವರು ಸಹಕರಿಸಿದರು.

 ಚಿತ್ರ-ವರದಿ:ಗುರುರಾಜ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next