Advertisement

ಡೊಂಬಿವಲಿ ಜಗದಂಬಾ ಮಂದಿರ: ಹರಿಕಥಾ ಕಾಲಕ್ಷೇಪ

12:30 AM Mar 09, 2019 | |

ಡೊಂಬಿವಲಿ: ಡೊಂಬಿವಲಿ ಪಶ್ಚಿಮದ ಪ್ರಸಿದ್ಧ ಶ್ರೀ ಜಗದಂಬಾ ಮಂದಿರದಲ್ಲಿ ಮಾ.  5ರಂದು ಹರಿಕಥಾವಿದ್ವಾನ್‌ ವೈ. ಅನಂತ ಪದ್ಮನಾಭ ಭಟ್‌  ಕಾರ್ಕಳ ಇವರಿಂದ ಶ್ರೀನಿವಾಸ ಕಲ್ಯಾಣ ಹರಿಕಥಾ ಕಾಲಕ್ಷೇಪವನ್ನು ಆಯೋಜಿಸಲಾಯಿತು.

Advertisement

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರದಲ್ಲಿ ಅತಿಥಿಗಳಾಗಿ ಶ್ರೀ ರಾಧಾಕೃಷ್ಣ ಮಂದಿರದ ಪ್ರಧಾನ ಅರ್ಚಕ  ಪ್ರಕಾಶ ಭಟ್‌ ಕಾನಂಗಿ, ಉದ್ಯಮಿಗಳಾದ  ರವಿ ಸನಿಲ್‌,  ಶೇಖರ್‌ಕೋಟ್ಯಾನ್‌, ಮೋಹನ್‌ ಸಾಲ್ಯಾನ್‌, ನಿತ್ಯಾನಂದ್‌
ಜತ್ತನ್‌, ದೇವದಾಸ್‌ ಕುಲಾಲ್‌ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ವೈ. ಅನಂತ ಪದ್ಮನಾಭ ಭಟ್‌ ಕಾರ್ಕಳ ಇವರನ್ನು ಮಂದಿರದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.

ಹರಿಕಥಾ ಕಾಲಕ್ಷೇಪದಲ್ಲಿ ಹಾರ್ಮೋನಿಯಂ ಮತ್ತು ತಬಲಾ ದಲ್ಲಿ ಕ್ರಮವಾಗಿ ಶೇಖರ್‌ ಸಸಿಹಿತ್ಲು ಮತ್ತು ಜನಾರ್ದನ್‌ ಸಾಲ್ಯಾನ್‌, ರವಿ ಕುಕ್ಯಾನ್‌ ಅವರು ಸಹಕರಿಸಿದರು.  ಡೊಂಬಿವಲಿಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸಂಘಟಕ ವಸಂತ್‌ ಸುವರ್ಣ ಅವರು ಕಾರ್ಯಕ್ರಮ ನಿರೂಪಿಸಿದರು.

ಯಕ್ಷಕಲಾ ಸಂಸ್ಥೆ ಮತ್ತು ಶ್ರೀ ಜಗದಂಬಾ ಮಂದಿರದ ಪದಾಧಿಕಾರಿಗಳು, ಸದಸ್ಯರು  ಮಹಿಳಾ ವಿಭಾಗದ ಸದಸ್ಯೆಯರು  ಉಪಸ್ಥಿತರಿದ್ದು ಸಹಕರಿಸಿದರು.  ಮಂದಿರದ ಗೌರವಾಧ್ಯಕ್ಷ ದಿವಾಕರ ರೈ, ಅಧ್ಯಕ್ಷ ಹರೀಶ್‌ ಡಿ. ಶೆಟ್ಟಿ, ಕಾರ್ಯದರ್ಶಿ ರಾಜೇಶ್‌ ಸಿ. ಕೋಟ್ಯಾನ್‌, ಕೋಶಾಧಿಕಾರಿ ರವಿ ಶೆಟ್ಟಿ, ಉಪಾಧ್ಯಕ್ಷರಾದ ಮಾಧವ ಪೂಜಾರಿ ಮತ್ತು ರವೀಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ಸಚಿನ್‌ ಪೂಜಾರಿ, ಜತೆ ಕೋಶಾಧಿಕಾರಿ ಸುರೇಶ್‌ ಶೆಟ್ಟಿ ಶೃಂಗೇರಿ ಹಾಗೂ ಪೂಜಾ ಸಮಿತಿಯ ಮತ್ತು ಸರ್ವ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮ ನೆರವೇರಿತು. ಕಲಾಭಿ ಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next