Advertisement

ಧಾರವಾಡ ಬಿಜೆಪಿ ಕಚೇರಿಗೆ ವಾಮಾಚಾರ? ಬೊಟ್ಟಿಟ್ಟ ಗೊಂಬೆ ಪತ್ತೆ 

12:11 PM Mar 28, 2018 | Team Udayavani |

ಧಾರವಾಡ: ನಗರದ ಹೃದಯ ಭಾಗದಲ್ಲಿರುವ ಸುಭಾಷ್‌ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗೊಂಬೆಯೊಂದು ನೇತು ಹಾಕಲಾಗಿದ್ದು ವಾಮಾಚಾರ ಮಾಡಿಸಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.

Advertisement

ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಗೊಂಬೆ ಕಚೇರಿಯ ಎದುರಿನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಬಿಜೆಪಿ ಜಿಲ್ಲಾಧ್ಯಕ್ಷರು ಧಾರವಾಡ ನಗರ ಠಾಣೆಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. 

ಕಚೇರಿಯ ಸುತ್ತಲಿರುವ ಕಟ್ಟಡಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. 

ರಾತ್ರಿ 12 ಗಂಟೆಯ ಬಳಿಕ ಯಾರೋ ಗೊಂಬೆಯನ್ನು ಇರಿಸಿ ಹೋಗಿದ್ದಾರೆ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next