Advertisement

ಚಂದ್ರಮೌಳೇಶ್ವರ ದೇಗುಲದಲ್ಲಿ ದಾಖಲೀಕರಣ ಕಾರ್ಯಾಗಾರ

12:23 PM Nov 23, 2019 | Suhan S |

ಹುಬ್ಬಳ್ಳಿ: ವಿಶ್ವ ಪರಂಪರಾ ಸಪ್ತಾಹ ಅಂಗವಾಗಿಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣೆ ವತಿಯಿಂದ ಉಣಕಲ್ಲನ ರಾಷ್ಟ್ರೀಯ ಸಂರಕ್ಷಿತ ಸ್ಮಾರಕವಾದ ಚಂದ್ರಮೌಳೇಶ್ವರ ದೇವಾಲಯದ ಆವರಣದಲ್ಲಿ ದಾಖಲೀಕರಣ ಕಾರ್ಯಾಗಾರ ನಡೆಯಿತು.

Advertisement

ವಲಯದ ಅಧಿಕಾರಿಗಳು ಸ್ಮಾರಕಗಳ ರಚನೆ, ನಿರ್ಮಾಣಕ್ಕಾಗಿ ಉಪಯೋಗಿಸಿದ ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ನಂತರ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ದಾಖಲೀಕರಣ ಕುರಿತಾಗಿ ಕೆಎಲ್‌ಇ ವಿವಿ ವಾಸ್ತುಶಿಲ್ಪ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿನಯಾ ಹಿರೇಮಠ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪುರಾತತ್ವ ಇಲಾಖೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next