Advertisement

ಡಾಕ್ಯುಮೆಂಟರಿ

03:45 AM Apr 07, 2017 | |

ಕಾಲೇಜು ಲೈಫ‌ಲ್ಲಿ ಬಂಕ್‌ ಹಾಕಿ ಸಿನೆಮಾಕ್ಕೆ ಹೋಗೋದು, ಅಲ್ಲಿಗೆ ಇಲ್ಲಿಗೆ ಅಂಥ ಅಲೆಮಾರಿಯಂತೆ ಫ್ರೆಂಡ್ಸ್‌ ಒಟ್ಟಿಗೆ ತಿರುಗಾಡುವುದು ಕಾಮನ್‌ ಮ್ಯಾಟರ್‌. ಅದೇ ಕ್ರಮೇಣ ಅಭ್ಯಾಸವಾಗಿ ಬಿಟ್ಟರೆ ಸ್ಟೂಡೆಂಟ್‌ ಜೀವನ ಫ‌ಜೀತಿಯಾಗಿ ಬಿಡುವುದರಲ್ಲಿ ಎರಡು ಮಾತಿಲ್ಲ!

Advertisement

ಪಿಯುಸಿ ಮುಗಿದ ಮೇಲೆ ಮುಂದೆ ಏನು ಮಾಡುವುದು ಎನ್ನುವ ಯೋಚನೆಯಲ್ಲಿದ್ದಾಗ, ಮೊದಲೇ ಭವಿಷ್ಯದ ಬಗ್ಗೆ ಅರೆಬೆಂದ ನಿರ್ಧಾರವನ್ನು ಮಾಡಿಬಿಟ್ಟಿದ್ದೆ. ಅದರಂತೆ ಕೊನೆಗೂ “ಜರ್ನಲಿಸಂ’ ಸಬೆjಕ್ಟ್ ಆಯ್ಕೆ ಮಾಡಿಕೊಂಡೆ. ಆವತ್ತಿನಿಂದ ಲೈಫ್ಸ್ಟೈಲ್‌ ಸ್ವಲ್ಪ ಬದಲಾಗಿ ಬರೀ ಓದು-ಬರಹಕ್ಕೆ ಸೀಮಿತಗೊಂಡಿತ್ತು.

ಎಲ್ಲರ ಹಾಗೆ ನಾವು  ಕೂಡ ಕಾಲೇಜಿಗೆ ಬಂಕ್‌ ಹಾಕಿ ಕ್ಯಾಂಪಸ್‌ ಸುತ್ತಿ ಟೈಮ್‌ಪಾಸ್‌ ಮಾಡುತ್ತಿದ್ದೆವು. ಆದರೆ, ನಾವು ಫ್ರೀ ಪೀರಿಯೆಡ್‌ ಇದ್ದಾಗ ಕ್ಯಾಂಪಸ್‌ಗೆ ಪ್ರದಕ್ಷಿಣೆ ಹಾಕುವ ಬದಲು ಲೈಬ್ರರಿ ಕಡೆ ಮುಖ ಮಾಡಿದ್ದೇ ಜಾಸ್ತಿ.

ನಾನು ಆಗಷ್ಟೇ ಫ‌ಸ್ಟ್‌ ಇಯರ್‌ಗೆ ಸೇರಿದ್ದಷ್ಟೆ. ಫೈನಲ್‌ ಇಯರ್‌ನ ಕೆಲವು ಹುಡುಗರ ಪರಿಚಯ ನನಗಿತ್ತು. ಪ್ರತಿದಿನ ಹೋದಾಗ ಅವರೊಂದಿಗೆ ಆತ್ಮೀಯನಾಗುತ್ತ ಬಂದೆ. ಅವರಿಗೆ ಕಿರು ಚಿತ್ರಗಳನ್ನು ಮಾಡುವುದರಲ್ಲಿ ಅದೇನೋ ಆಸಕ್ತಿ. ಅವರ ಆಸಕ್ತಿಗೆ ನಾನು ಸೋತಿದ್ದೆ.

ಬೇರೆ ಕಾಲೇಜಿನಲ್ಲಿ ನಡೆದ ಸೆಮಿನಾರಿನಲ್ಲಿ ಅವರೊಂದಿಗಿನ ಒಡನಾಟ ಮತ್ತಷ್ಟು ಬೆಳೆಯ ತೊಡಗಿತ್ತು. ಮುಂದೆ ಕಾಲೇಜು ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೊದಲ ಸಲ ನಾನು ಕ್ಯಾಮರಾ ಕಣ್ಣಿಗೆ ಕಾಣಿಸಿದ್ದೆ. ಅದು ಕೂಡ ಒಂದು ಕಿರುಚಿತ್ರದ ಮುಖ್ಯ ಪಾತ್ರದಲ್ಲಿ. ಅದೇ ಫೈನಲ್‌ ಇಯರ್‌ನ ನಾಲ್ಕು  ಸ್ನೇಹಿತರ ಟೀಮ್‌ನಲ್ಲಿ ನಾನು ಕೂಡ ಒಬ್ಬನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು.

Advertisement

ಡಿಗ್ರಿ ಲೆವೆಲ್‌ನಲ್ಲಿ ಪ್ರತಿಭೆಯನ್ನು ಗುರುತಿಸುವ ಅದೆಷ್ಟೋ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಹಾತೊರೆಯುತ್ತಾರೆ. ಪತ್ರಿಕೋದ್ಯಮದ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ತಮ್ಮ ಕ್ರಿಯೇಟಿವ್‌ ಐಡಿಯಾಸ್‌ಗೆ ಬಣ್ಣ ಬಳಿಯುವ ಸಣ್ಣಪುಟ್ಟ ಸಾಮಾಜಿಕ ಸಂದೇಶಗಳನ್ನು ರವಾನಿಸುವ ಕಿರುಚಿತ್ರಗಳು ಸಾಕ್ಷ್ಯಚಿತ್ರಗಳನ್ನು ಮಾಡುವ ಅವಕಾಶಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕುತ್ತಾರೆ.

ಇತ್ತೀಚೆಗೆ ಕಾಲೇಜಿನಲ್ಲಿ ಕ್ಯಾಮರಾವನ್ನು ವಿದ್ಯಾರ್ಥಿಗಳು ತಾವೇ ಬಳಸಿಕೊಂಡು ತಮಗೆ ಇಚ್ಛಿಸುವ ವಿಷಯದ ಬಗ್ಗೆ ಕಿರುಚಿತ್ರ ಮಾಡಿ ಅದರ ಎಡಿಟಿಂಗ್‌ ಹಂತವನ್ನು ತಮ್ಮಲ್ಲೇ ಒಬ್ಬ ಮಾಡಿ, ಕಾಲೇಜಿನ ಸ್ಪರ್ಧೆಯಲ್ಲಿ ಜನ ಮೆಚ್ಚುಗೆ ಗಳಿಸುವ ಕಿರುಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮೊದಲ ಸಲ ನಾವೇ ಒಂದು ಹೊಸ ಪ್ರಯೋಗದ ಕಿರುಚಿತ್ರ ಮಾಡಿದಾಗ ಹಗಲು-ರಾತ್ರಿ ಎನ್ನದೆ ನಿದ್ದೆ ಬಿಟ್ಟು ಪರಿಶ್ರಮಪಟ್ಟು ಕೊನೆಗೆ ಅದನ್ನು ಯೂಟ್ಯೂಬ್‌ನಲ್ಲಿ ತೇಲಿ ಬಿಟ್ಟಾಗ ಸಿಕ್ಕ ಉತ್ತಮ ಪ್ರತಿಕ್ರಿಯೆಯ ಸಂತೋಷ ಹೇಳ ತೀರದು.

ಹೀಗೆ ಎಲ್ಲರ ಒಳಗೂ ಒಂದು ಪ್ರತಿಭೆ ಇರುತ್ತದೆ. ನಾವು ಹೊರತರಲು ಹಿಂಜರಿಯುತ್ತೇವೆ ಅಷ್ಟೇ. ನನ್ನ ಪ್ರತಿಭೆಗೆ ಜೀವ ಕೊಟ್ಟದ್ದು ಪತ್ರಿಕೋದ್ಯಮ. ಸಾಧನೆಯ ಶಿಖರವನ್ನು ಏರುವ ಕ್ರಿಯೇಟಿವ್‌ ಐಡಿಯಾಗಳಿರಬಹುದು. ಅವಕಾಶಗಳಿಗೆ ಕಾಯಬಾರದು. ನಾವೇ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು.

ಸುಹಾನ್‌
ಪತ್ರಿಕೋದ್ಯಮ ವಿಭಾಗ
ಎಂ.ಜಿ.ಎಂ ಕಾಲೇಜು ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next