Advertisement

ಬಸ್‌ನಲ್ಲೇ ಸುಲಭ ಹೆರಿಗೆ ಮಾಡಿಸಿದ ವೈದ್ಯರು!

09:15 AM Jul 27, 2017 | Team Udayavani |

ವಿಜಯಪುರ: ಚಾಲಕ, ನಿರ್ವಾಹಕರ ಸಮಯ ಪ್ರಜ್ಞೆ ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯರ ಸೂಕ್ತ ಸ್ಪಂದನೆ ಪರಿಣಾಮ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಸುಲಭ ಹೆರಿಗೆಯಾಗಿದೆ.

Advertisement

ಮಹಾರಾಷ್ಟ್ರ ಮೂಲದ ಗರ್ಭಿಣಿ ಲಕ್ಷ್ಮೀ ರಾಠೊಡ ಎಂಬುವರು ವಿಜಯಪುರ ಮಾರ್ಗವಾಗಿ ಬಾಗಲಕೋಟೆ ನಗರಕ್ಕೆ ಹೊರಟಿದ್ದರು.

ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅವರಿಗೆ ಬಸವನಬಾಗೇವಾಡಿ ತಾಲೂಕು ಕೊಲ್ಹಾರ ಬಳಿ ಹೆರಿಗೆ ನೋವು ಕಾಣಿಸಿಕೊಂಡಿತು. ಈ ಹಂತದಲ್ಲಿ ಸಮಯಪ್ರಜ್ಞೆ ಮೆರೆದ ಬಸ್‌ ಚಾಲಕ-ನಿವಾರ್ಹಕರು ಕೊಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣ ಅಗತ್ಯ ಔಷಧಗಳೊಂದಿಗೆ ಬಸ್‌ ನಿಲ್ದಾಣಕ್ಕೆ ಆಗಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ| ಎಸ್‌.ಎಂ. ಪಾಟೀಲ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ತಾಯಿ-ಮಗು
ಆರೋಗ್ಯವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next