Advertisement

ವೈದ್ಯರ ಮುಷ್ಕರ: ಕಲ್ಕತ್ತ ಹೈಕೋರ್ಟಿಗೆ ಪಿಐಎಲ್‌; ಮಮತಾ ಸರಕಾರಕ್ಕೆ 7 ದಿನ ಟೈಮ್‌

09:42 AM Jun 18, 2019 | Sathish malya |

ಕೋಲ್ಕತ : ದೇಶಾದ್ಯಂತ ಸಹಸ್ರಾರು ವೈದ್ಯರು ದಿನಪೂರ್ತಿ ಮುಷ್ಕರ ನಿರತರಾಗಿರುವಂತೆಯೇ ಈ ಮುಷ್ಕರವನ್ನು ಕಾನೂನು ಬಾಹಿರವೆಂದು ಘೋಷಿಸಬೇಕೆಂದು ಕೋರಿ ಕಲ್ಕತ್ತ ಹೈಕೋರ್ಟಿಗೆ ಇಂದು ಶುಕ್ರವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ

Advertisement

ಪೀಪಲ್‌ ಫಾರ್‌ ಬೆಟರ್‌ ಟ್ರೀಟ್‌ ಮೆಂಟ್‌ ಎಂಬ ಸೇವಾ ಸಂಘಟನೆಯ ಕುಣಾಲ್‌ ಸಹಾ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ವೈದ್ಯರ ಮುಷ್ಕರವನ್ನು ಕಾನೂನು ಬಾಹಿರವೆಂದು ಘೋಷಿಸಬೇಕಲ್ಲದೆ ಈ ಮುಷ್ಕರವನ್ನು ಕೊನೆಗೊಳಿಸುವಂತೆ ಮಾಡಬೇಕು ಹಾಗೂ ಪಶ್ಚಿಮ ಬಂಗಾಲ ಸರಕಾರ ವೈದ್ಯರ ಸುರಕ್ಷೆಗೆ ತೆಗೆದುಕೊಂಡಿರುವ ಕ್ರಮಗಳನ್ನು ತಿಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ಪಿಐಎಲ್‌ಗೆ ಉತ್ತರಿಸುವುದಕ್ಕೆ ಹೈಕೋರ್ಟ್‌ ಮಮತಾ ಬ್ಯಾನರ್ಜಿ ಸರಕಾರಕ್ಕೆ ಏಳು ದಿನಗಳ ಕಾಲಾವಕಾಶ ನೀಡಿದೆ. ಚೀಫ್ ಜಸ್ಟಿಸ್‌ ಟಿವಿ ಸುಬ್ರಮಣಿಯಮ್‌ ನೇತೃತ್ವದ ಕಲ್ಕತ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next