Advertisement

ಶ್ರೀರಾಮುಲು ಸಭೆ ಯಶಸ್ವಿ: ಪ್ರತಿಭಟನೆ ಕೈಬಿಡಲು ವೈದ್ಯರ ನಿರ್ಧಾರ

03:51 PM Sep 18, 2020 | keerthan |

ಬೆಂಗಳೂರು: ಪ್ರತಿಭಟನಾ ನಿರತ ವೈದ್ಯರ ಜೊತೆ ಆರೋಗ್ಯ ಸಚಿವ ಶ್ರೀರಾಮುಲು ನಡೆಸಿದ ಸಭೆ ಯಶಸ್ವಿಯಾಗಿದೆ. ವೈದ್ಯರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.

Advertisement

ಸಚಿವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ಐತಿಹಾಸಿಕ ನಿರ್ಧಾರಕ್ಕೆ ಕಾರಣರಾದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಅಚ್ಚರಿಯ ಬೆಳವಣಿಗೆ: ಗೂಗಲ್ ಪ್ಲೇಸ್ಟೋರ್ ನಿಂದ Paytm App ರಿಮೂವ್

ಹಾಗೆಯೇ, ಮುಷ್ಕರವನ್ನು ಕೈಬಿಟ್ಟ ವೈದ್ಯರಿಗೂ ಸರ್ಕಾರದ ಪರವಾಗಿ ಅಭಿನಂದನೆಗಳು. ಜನಸಾಮಾನ್ಯರ ಹಿತ ಕಾಪಾಡಲು ಸರ್ಕಾರ ಯಾವತ್ತೂ ಬದ್ಧವಾಗಿದ್ದು, ಕೋವಿಡ್ ಸಂಬಂಧಿತ ಸೇವೆಗಳು ಅಭಾದಿತವಾಗಿ ಮುಂದುವರಿಯಲಿವೆ ಎಂದು ಸಚಿವ ರಾಮುಲು ತನ್ನ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next