Advertisement

ವೈದ್ಯರೇನು ಆರೋಗ್ಯ ಸಚಿವರ ಮನೆಯ ಜೀತದಾಳುಗಳೇ?

09:42 AM Nov 04, 2017 | Team Udayavani |

ಬೆಂಗಳೂರು: ಜೈಲಿಗೆ ಹಾಕುತ್ತೇವೆ ಎಂದು ಬೆದರಿಸಲು ವೈದ್ಯರೇನು ಚಪ್ರಾಸಿಗಳೇ? ಅಥವಾ ಆರೋಗ್ಯ ಸಚಿವರ ಮನೆಯಲ್ಲಿ ಕೆಲಸ ಮಾಡುವ ಜೀತದಾಳುಗಳೇ? ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ವಿಚಾರದಲ್ಲಿ ಸರ್ಕಾರ ಹುಚ್ಚುತನ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ. 

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ತಾವೊಬ್ಬ ಬೃಹಸ್ಪತಿ, ತಾವೊಬ್ಬರೆ ಸತ್ಯ ಹರಿಶ್ಚಂದ್ರ,
ಉಳಿದವರೆಲ್ಲರೂ ಮಹಾನ್‌ ಭ್ರಷ್ಟರು ಎಂಬಂತೆ ರಮೇಶ್‌ಕುಮಾರ್‌ ಅವರು ಮಾತನಾಡುತ್ತಾರೆ. ವರ್ಗಾವಣೆಯ ಅವ್ಯವಹಾರ ಬಿಚ್ಚಿಟ್ಟರೆ ನಿಮ್ಮ ಮುಖವಾಡ ಬಯಲಿಗೆ ಬರುತ್ತೆ ಎಂದು ವೈದ್ಯರ ಸಂಘದ ಅಧ್ಯಕ್ಷ ಏಕವಚನದಲ್ಲಿ ಆರೋಗ್ಯ ಸಚಿವರಿಗೆ ಹೇಳುವ ಮಟ್ಟಕ್ಕೆ ಹೋಗಿದೆ ಎಂದರೆ ರಮೇಶ್‌ಕುಮಾರ್‌ ಎಂತವರು ಎಂಬುದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಕೊಡಿಸಿದರೆ ಬಡವರು ಯಾಕೆ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗೆ ಹೋಗುತ್ತಾರೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಖಾಸಗಿ ಆಸ್ಪತ್ರೆಗಳ ಮೇಲೆ ಗದಾಪ್ರಹಾರ ಸಲ್ಲ. ನಮ್ಮಲ್ಲಿಗೆ ಬನ್ನಿ ಎಂದು ಅವರು ಕರೆಯುವುದಿಲ್ಲ. ಹಣ ಕಟ್ಟಲು ಸಾಧ್ಯವಿಲ್ಲದಿದ್ದರೆ ಅಲ್ಲಿಗೆ ಹೋಗುವುದು ಬೇಡ ಎಂದು ಹೇಳಿದರು.

ರಾಮನಗರ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಹೆರಿಗೆಗೆ ಆರು ಸಾವಿರ ರೂ.ನಿಗದಿಪಡಿಸಿದ್ದಾರೆ. ನಾನೇ ಆ ಬಗ್ಗೆ ಪ್ರಶ್ನಿಸಿದರೆ, ಸರ್‌, ನಾವು 5 ಲಕ್ಷ ರೂ.ಕೊಟ್ಟು ಪೋಸ್ಟಿಂಗ್‌ ಪಡೆದಿದ್ದೇವೆ. ಆ ಹಣ ವಾಪಸ್‌ ಪಡೆಯುವುದು ಹೇಗೆ ಎಂದು ಕೇಳ್ತಾರೆ. ಇದು ಸರ್ಕಾರದ ಸ್ಥಿತಿ. ಆರೋಗ್ಯ ಇಲಾಖೆಯಲ್ಲಿ ವರ್ಗಾವಣೆ ದಂಧೆ ಯಾವ ಮಟ್ಟದಲ್ಲಿ ಆಗಿದೆ ಎಂಬುದು ಗೊತ್ತಿದೆ. 
 ● ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next