Advertisement

ಉ.ಕ.ದಿಂದ ಸ್ಪರ್ಧಿಸಿದರೆ ಗೆಲ್ಲುವ ಧಿಮಾಕು ಬೇಡ

07:35 AM Oct 02, 2017 | Harsha Rao |

ಬೆಳಗಾವಿ: “ಉತ್ತರ ಕರ್ನಾಟಕದ ಜನರು ಸೌಮ್ಯರು ಹಾಗೂ ಸ್ವಾಭಿಮಾನಿಗಳು. ಹಾಗೆಂದು ಅವರ ಮುಂದೆ ಧಿಮಾಕಿನ ರಾಜಕಾರಣ ಮಾಡಿದರೆ ನಡೆಯುವುದಿಲ್ಲ’ ಎಂದು ಗ್ರಾಮೀಣಾಭಿವೃದಿಟಛಿ ಸಚಿವ ಎಚ್‌.ಕೆ.ಪಾಟೀಲ ಅವರು ಬಿಜೆಪಿ ಹಾಗೂ ಜೆಡಿಎಸ್‌ ಅಧ್ಯಕ್ಷರಿಗೆ ಟಾಂಗ್‌ ನೀಡಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ
ಅವರು, “ಉತ್ತರ ಕರ್ನಾಟಕದಿಂದ ಸ್ಪರ್ಧೆ ಮಾಡಿ ಗೆದ್ದು ಬರುತ್ತೇವೆಂಬ ಧಿಮಾಕು ಯಾರಿಗೂ ಬೇಡ. ಹಾಗೆ ಭಾವಿಸಿದರೆ ಈ ಜನರು ಬೇರೆ ಕಡೆಯಿಂದ ಬಂದು ಸ್ಪರ್ಧೆ ಮಾಡುವವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಯಡಿಯೂರಪ್ಪ ಹಾಗೂ ಕುಮಾರ ಸ್ವಾಮಿಗೆ ಪರೋಕ್ಷ ಎಚ್ಚರಿಕೆ ನೀಡಿದರು. “ಈ ಹಿಂದೆ ರಾಮಕೃಷ್ಣ ಹೆಗಡೆ ಲಿಂಗಾಯತ ನಾಯಕರಾಗಿ ಗುರುತಿಸಿಕೊಂಡಿದ್ದರು. ಆದರೆ ಆಗ ಅವರು ಕಾಂಗ್ರೆಸ್‌ನ ಯುವ ನಾಯಕ ಸಿದ್ದು ನ್ಯಾಮಗೌಡ ವಿರುದಟಛಿ ಸೋಲು ಅನುಭವಿಸಿದರು. ಹಾಗಿರುವಾಗ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಯಾವ ಲೆಕ್ಕ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next