Advertisement

ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಬಾರದು

10:32 PM Apr 20, 2019 | Team Udayavani |

ವಿಜಯಪುರ: “ಕೂಸು ಜನ್ಮ ತಾಳುವ ಮುನ್ನ ಕುಲಾಯಿ ಹೊಲಿಸುವುದು ಬೇಡ. ಚುನಾವಣೆ ಮುಗಿಯಲಿ, ಆಗ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬುದು ಸ್ಪಷ್ಟವಾಗಲಿದೆ’ ಎಂದು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಶನಿವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು
* ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಈ ಬಾರಿ ಎನ್‌ಡಿಎ, ಯುಪಿಎ ಹೊರತಾಗಿ ಬೇರೆ ಮೈತ್ರಿ ಪಕ್ಷ ಅಧಿ ಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಇನ್ನೂ ಚುನಾವಣೆ ಬಾಕಿಯಿದೆ. ಈಗಲೇ ನಿರ್ಧಾರ ಹೇಳುವುದು ಸರಿಯಾದ ಕ್ರಮವಲ್ಲ. ಚುನಾವಣೆ ಮುಗಿದ ಬಳಿಕ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ, ಯಾರು ಪ್ರಧಾನಿ ಆಗಲಿದ್ದಾರೆ ಎಂದು ಹೇಳಲು ಸಾಧ್ಯ.

* ರಾಜ್ಯದಲ್ಲಿ ಜೆಡಿಎಸ್‌ 7 ಕ್ಷೇತ್ರಗಳಲ್ಲಿ ಸ್ಪ ರ್ಧಿಸಿದ್ದರೂ ಆ ಪಕ್ಷದ ನಾಯಕ ಎಚ್‌.ಡಿ. ದೇವೇಗೌಡ ಅವರು ಮತ್ತೂಮ್ಮೆ ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾರೆ ಎಂಬ ಯಡಿಯೂರಪ್ಪ ಅವರ ಹೇಳಿಕೆ ತಲೆಬುಡವಿಲ್ಲದ್ದು. ನಾನು ಮತ್ತೆ ಪ್ರಧಾನಿ ಆಗುತ್ತೇನೆಂದು ಎಚ್‌.ಡಿ. ದೇವೇಗೌಡರು ಎಲ್ಲೂ ಹೇಳಿಲ್ಲ. ಕನಸು ಕಾಣಲು ನಾವೇನು ಯಡಿಯೂರಪ್ಪ ಅವರಂತಲ್ಲ.

Advertisement

Udayavani is now on Telegram. Click here to join our channel and stay updated with the latest news.

Next