Advertisement

20ರ ವರೆಗೆ ವಿಶ್ವಾಸ ಮತ ಬೇಡ

06:40 AM Sep 15, 2017 | Team Udayavani |

ಚೆನ್ನೈ/ನವದೆಹಲಿ: ತಮಿಳುನಾಡು ವಿಧಾನ ಸಭೆಯಲ್ಲಿ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಸರ್ಕಾರ ಸೆ.20ರ ವರೆಗೆ ಬಹುಮತ ಸಾಬೀತುಪಡಿಸಬೇಕಾದ ಅಗತ್ಯವಿಲ್ಲ ಎಂದಿದೆ ಮದ್ರಾಸ್‌ ಹೈಕೋರ್ಟ್‌. ನ್ಯಾ.ಎಂ.ದುರೈ ಸ್ವಾಮಿ ನೇತೃತ್ವದ ನ್ಯಾಯಪೀಠ ಗುರುವಾರ ಮಧ್ಯಂತರ ಆದೇಶ ನೀಡಿದೆ. ಇದರಿಂದಾಗಿ ಸರ್ಕಾರ ಬೀಳಿಸುತ್ತೇವೆ ಎಂದು ಸವಾಲು ಹಾಕಿದ್ದ ಟಿ.ಟಿ.ವಿ.ದಿನಕರನ್‌ ನೇತೃತ್ವದ ಎಐಎಡಿಎಂಕೆ ಬಣಕ್ಕೆ ಹಿನ್ನಡೆ ಉಂಟಾಗಿದೆ. ಸರ್ಕಾರದ ಅಸ್ತಿತ್ವ ಪ್ರಶ್ನಿಸಿ ಪ್ರತಿಪಕ್ಷ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಕೂಡ ಹೈಕೋರ್ಟಲ್ಲಿ ಮೊಕದ್ದಮೆ ಹೂಡಿದ್ದರು.

Advertisement

ತಮಿಳುನಾಡು ವಿಧಾನಸಭೆಯಲ್ಲಿ 19 ಮಂದಿ ಶಾಸಕರನ್ನು ಅನರ್ಹಗೊಳಿಸುವ ವಿಚಾರ ಇನ್ನೂ ಇತ್ಯರ್ಥವಾಗಿಲ್ಲ. ಹೀಗಾಗಿ ಸೆ.20ರ ವರೆಗೆ ವಿಶ್ವಾಸ ಮತ ಕೋರಬೇಕಾದ ಅಗತ್ಯವಿಲ್ಲವೆಂದಿತು ನ್ಯಾಯಪೀಠ. ಇದಕ್ಕೂ ಮೊದಲು ಅಡ್ವೊಕೇಟ್‌ ಜನರಲ್‌ ವಿಜಯ ನಾರಾಯಣನ್‌ ಸ್ಪೀಕರ್‌ ಸಾಂವಿಧಾನಿಕವಾ ಗಿಯೇ ಕ್ರಮ ಕೈಗೊಂಡಿದ್ದಾರೆಂದು ಹೇಳಿದ್ದರು.  ಶಶಿಕಲಾ ಮತ್ತು ತಮ್ಮನ್ನು ಹೊರಗಿಟ್ಟು ವಿಲೀನ ಘೋಷಣೆ ಮಾಡಿದ ವೇಳೆ ದಿನಕರನ್‌ ಸರ್ಕಾರ ಪತನಗೊಳಿಸುವ ಎಚ್ಚರಿಸಿದ್ದರು.

ಇದೇ ವೇಳೆ ದಿನಕರನ್‌ ಬಣದ ನಾಯ ಕರು ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಶಶಿಕಲಾರನ್ನು ಉಚ್ಚಾಟನೆ ಮಾಡಿದ್ದು ತಪ್ಪು. ಸಿಎಂ ಪಳನಿ ಸ್ವಾಮಿ ಮತ್ತು ಡಿಸಿಎಂ ಓ.ಪನ್ನೀರ್‌ಸೆಲ್ವಂ ಬಣಕ್ಕೆ ಅಧಿಕಾರ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next