Advertisement

ಕನಸು ಈಡೇರಲು ಸುಮ್ಮನೆ ಕೂರಬೇಡಿ

04:09 AM May 26, 2020 | Lakshmi GovindaRaj |

ಸಾಮಾನ್ಯವಾಗಿ ಸ್ಟಾರ್‌ನಟರು ತಮ್ಮ ಟ್ವೀಟ್‌ ಮೂಲಕ ಏನಾದರೊಂದು ಸಂದೇಶ ಕೊಟ್ಟರೆ, ಅವರ ಅಭಿಮಾನಿಗಳು ಅದನ್ನು ಚಾಚು ತಪ್ಪದೆ ಮಾಡುತ್ತಾರೆ. ಒಂದಷ್ಟು ಮಂದಿ ಕಾಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ. ಈಗ ರವಿಚಂದ್ರನ್‌ ಪುತ್ರ ಮನುರಂಜನ್‌ ಅವರೂ ಸಹ ತಮ್ಮ ಟ್ವಿಟ್ಟರ್‌ಖಾತೆಯಲ್ಲೊಂದು ಸಂದೇಶ ಹಾಕಿದ್ದಾರೆ. ಅವರ ಸಂದೇಶಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Advertisement

ಅಂದಹಾಗೆ, ಮನುರಂಜನ್‌ ಅವರು ಮಾಡಿರುವ ಟ್ವೀಟ್‌ನಲ್ಲಿ, “ನಿಮ್ಮ ಕನಸುಗಳು ನನಸಾಗುವವರೆಗೆ ಸುಮ್ಮನೆ ಕೂರಬೇಡಿ. ಎಂದಿಗೂ ನೀವು ವಿಶ್ವಾಸ ಕಳೆದುಕೊಳ್ಳಬೇಡಿ. ಏನೂ ಇಲ್ಲವಾಗ ಯಾರಾದರೂ ಇದ್ದೇ ಇರುತ್ತಾರೆ. ಯಾವ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬೇಡಿ’ ಎಂದು ಪಾಸಿಟಿವ್‌ ಅಂಶಗಳ ಕುರಿತು ಟ್ವೀಟ್‌ ಮಾಡಿದ್ದಾರೆ. ಅವರ ಈ ಟ್ವೀಟ್‌ ನೋಡಿ ಅನೇಕ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಮನುರಂಜನ್‌ ಅಭಿನಯದ “ಪ್ರಾರಂಭ ‘ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಕೊರೊನಾ ಸಮಸ್ಯೆ ಎದುರಾಗದಿದ್ದರೆ, ಇಷ್ಟೊತ್ತಿಗಾಗಲೇ “ಪ್ರಾರಂಭ ‘ ಚಿತ್ರ ತನ್ನ ಕಾರ್ಯಾರಂಭ ಶುರು ಮಾಡಬೇಕಿತ್ತು. ಲಾಕ್‌ಡೌನ್‌ ಕಾರಣ, ಸಿನಿಮಾ ಬಿಡುಗಡೆಗೊಂಡಿಲ್ಲ. ಇತ್ತೀಚೆಗೆ ಚಿತ್ರತಂಡ ಚಿತ್ರದ ಲಿರಿಕಲ್‌ ವಿಡಿಯೊ ಬಿಡುಗಡೆ ಮಾಡಿದೆ. ಆನಂದ್‌ ಆಡಿಯೋದ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದು, ಹಾಡು ಕೇಳಿದವರಿಂದ ಮೆಚ್ಚುಗೆ ಸಿಕ್ಕಿದೆ. ಇದೊಂದು ಲವ್‌ಸ್ಟೋರಿಯಾಗಿದ್ದರೂ, ಈ ಚಿತ್ರದಲ್ಲಿ ಮನುರಂಜನ್‌ ವಿಭಿನ್ನ ಪಾತ್ರ ಮಾಡಿದ್ದಾರೆ. ಅವರಿಗಿಲ್ಲಿ ಎರಡು ಶೇಡ್‌ ಇರುವಂತಹ ಪಾತ್ರ ಸಿಕ್ಕಿದೆ.

ಈ ಚಿತ್ರವನ್ನು ಮನುಕಲ್ಯಾಡಿ ನಿರ್ದೇಶನ ಮಾಡಿದ್ದಾರೆ. ಅವರ ಸಹೋದರ ಜಗದೀಶ್‌ ಕಲ್ಯಾಡಿ ಸಿನಮಾವನ್ನು ನಿರ್ಮಾಣ ಮಾಡಿದ್ದಾರೆ. ರವಿ ವಡೇರಹಳ್ಳಿ ಚಿತ್ರದ ಸಹ ನಿರ್ಮಾಪಕರು. ಚಿತ್ರಕ್ಕೆ ಸುರೇಶ್‌ ಬಾಬು ಛಾಯಾಗ್ರಹಣವಿದೆ. ಪ್ರಜ್ವಲ್‌ ಪೈ, ವಿಜಯಕುಮಾರ್‌, ಜೈ, ನವೀನ್‌ ಕುಮಾರ್‌,ಗುರುಪ್ರಸಾದ್‌, ರವಿ ಸಂತೆ ಹೈಕ್ಲು, ಸಂತೋಷ್‌ ನಾಯ್ಕ, ಥ್ರಿಲ್ಲರ್‌ ಮಂಜು, ವಿಕ್ರಮ್‌ ಮೋರ್‌, ಕಿಶೋರ್‌, ಮನೋಜ್‌, ಚೇತನ್‌ ಇತರರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಈ ಚಿತ್ರವನ್ನು ಮೈಸೂರು ಟಾಕೀಸ್‌ ರಿಲೀಸ್‌ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next