Advertisement

ದಿನಸಿ ದರಕ್ಕೆ ಮಾರಿದರೆ ಕಠಿಣ ಕ್ರಮ

05:16 PM Apr 22, 2020 | Suhan S |

ನರೇಗಲ್ಲ: ಅಗತ್ಯ ವಸ್ತುಗಳನ್ನು ಕಿರಾಣಿ ಅಂಗಡಿಗಳ ಮಾಲೀಕರು ನಿಗದಿತ ಬೆಲೆಗಿಂತ ಎರಡು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಾಲೂಕು ಆಡಳಿತ ನೀಡಿರುವ ದರಪಟ್ಟಿಯಂತೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಬೇಕು ಎಂದು ಆಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ ಹೇಳಿದರು.

Advertisement

ಪಟ್ಟಣದಲ್ಲಿ ಸೋಮವಾರ ಅಂಗಡಿಗಳಿಗೆ ತಾಲೂಕು ಆಡಳಿತ ಹೊರಡಿಸಿರುವ ದರಪಟ್ಟಿ ವಿತರಿಸಿ ಅವರು ಮಾತನಾಡಿದರು. ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಬೇಕು. ಅಲ್ಲದೇ ದಿನಸಿ ವಸ್ತುಗಳನ್ನು ಅಧಿಕ ಬೆಲೆ ಮಾರಾಟ ಮಾಡುವುದು ಕಂಡು ಬಂದರೆ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವ್ಯಾಪಾರಸ್ಥರು ಈ ಕೋವಿಡ್ 19 ವೈರಸ್‌ ತಡೆಗಟ್ಟುವಲ್ಲಿ ತಾವು ಒಬ್ಬ ಸೇವಕರಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಎಸ್‌.ಎಸ್‌. ಕುಷ್ಟಗಿ ಮಾತನಾಡಿದರು. ರಾಮಚಂದ್ರ ಕಜ್ಜಿ, ಪಿಎಸ್‌ಐ ಬಿ.ಬಿ. ಕೊಳ್ಳಿ, ನೀಲಪ್ಪ ಚಳ್ಳಮರದ, ಎಸ್‌.ಎ. ಜಕ್ಕಲಿ, ಆರೀಫ್‌ ಮಿರ್ಜಾ, ನಿಂಗಪ್ಪ ಮಡಿವಾಳರ, ಮಹದೇವಪ್ಪ ಮ್ಯಾಗೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next