Advertisement

ಮುಖ್ಯಮಂತ್ರಿಯಾಗಿದ್ದಾಗ ನೆನಪಾಗಲಿಲ್ಲವೇ: ರೆಡ್ಡಿ

06:25 AM Feb 11, 2018 | |

ಬೆಂಗಳೂರು: ಕೊಳಗೇರಿಯಲ್ಲಿ ಬಿಜೆಪಿ ನಾಯಕರ ವಾಸ್ತವ್ಯದ ಹಿಂದೆ ಮತ ಗಳಿಕೆಯ ಗಿಮಿಕ್‌ ಅಷ್ಟೇ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿ.ಎಸ್‌. ಯಡಿಯೂರಪ್ಪ ಈ ಹಿಂದೆ ಮೂರು ವರ್ಷ ಮುಖ್ಯಮಂತ್ರಿ ಆಗಿದ್ದರು. ಆಗ ನೆನಪಿಗೆ ಬಾರದ ಕೊಳಗೇರಿ ನಿವಾಸಿಗಳ ಬಗ್ಗೆ  ಈಗ ಒಮ್ಮೆಲೆ ಕಾಳಜಿ ಹುಟ್ಟಿರುವುದು ಮತ ಗಳಿಕೆಯ ಗಿಮಿಕ್‌ ಅಲ್ಲದೆ ಮತ್ತೇನು’ ಎಂದು ಪ್ರಶ್ನಿಸಿದರು.

ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಸ್ಲಂ ಬಾಲಕನೊಬ್ಬನನ್ನು ದತ್ತು ಪಡೆಯುವುದಾಗಿ ಹೇಳಿದ್ದರು. ಬಾಲಕನ ಎಲ್ಲಾ ಖರ್ಚು-ವೆಚ್ಚ ಭರಿಸುವುದಾಗಿಯೂ ಹೇಳಿದ್ದರು. ಆದರೆ, ಆ ನಂತರ ಬಾಲಕನನ್ನು ನಡುರಸ್ತೆಯಲ್ಲೇ ಬಿಟ್ಟುಹೋದರು. ಹೀಗೆ ಬರೀ ಸುಳ್ಳು ಹೇಳಿಕೊಂಡೆ ಯಡಿಯೂರಪ್ಪ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಎಂದರು.

ಶ್ರೇಷ್ಠ ಹಿಂದೂಗಳು
ಈ ಹಿಂದೆ ರಾಜೀವ್‌ ಗಾಂಧಿ ದೇವಾಲಯಕ್ಕೆ ಹೋಗುತ್ತಿದ್ದರು. ರಾಹುಲ್‌ ಗಾಂಧಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಬಿಜೆಪಿ ನಾಯಕರು ಇದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ವಾಸ್ತವವಾಗಿ ಬಿಜೆಪಿಯವರಿಗಿಂತಲೂ ನಾವೇ ಶ್ರೇಷ್ಠ ಹಿಂದೂಗಳು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next