Advertisement

ರಾಜ್ಯ “ಕೈ” ಪಡೆ ಸೋಷಿಯಲ್ ಮೀಡಿಯಾ ಟೀಮ್ ಗೆ ರಮ್ಯಾ ಪಾಠ!

01:22 PM Jan 06, 2018 | Sharanya Alva |

ನವದೆಹಲಿ: ಪ್ರತಿದಿನ ತಪ್ಪದೇ ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಪೋಸ್ಟ್ ಮಾಡಿ, ಬಿಜೆಪಿ, ಜೆಡಿಎಸ್ ಪಕ್ಷಗಳ ಹುಳುಕಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬೆಳಕು ಚೆಲ್ಲಬೇಕು ಎಂದು ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ರಾಜ್ಯದ ಜಾಲತಾಣ ಟೀಮ್ ಗೆ ಪಾಠ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಮಾತನಾಡಿದ ಅವರು, ವಿ ಸಪೋರ್ಟ್ ಕಾಂಗ್ರೆಸ್(We Support Congress) ಎಂಬ ಗ್ರೂಪ್ ಅನ್ನು ರಚಿಸಬೇಕು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷದ ಸಾಧನೆ ಜನರಿಗೆ ತಲುಪಬೇಕು. ಅಲ್ಲದೇ ಕಾಂಗ್ರೆಸ್ ವಿರೋಧಿ ಟ್ರೋಲ್ ಹೆಚ್ಚು ಜನರಿಗೆ ತಲುಪದಂತೆ ಮಾಡಿ ಎಂದು ರಾಜ್ಯ ಸೋಷಿಯಲ್ ಮೀಡಿಯಾ ತಂಡಕ್ಕೆ ಸೂಚನೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next