Advertisement

ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಬೇಡಿ: ಜಾಧವ

04:31 PM Jun 05, 2017 | Team Udayavani |

ಕಾಳಗಿ: ಅಧಿಕಾರಿಗಳು ನಿರ್ಲಕ್ಷ ವಹಿಸಿ ಕಾಟಾಚಾರಕ್ಕೆ ಕೆಲಸ ಮಾಡದೆ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪುವಂತೆ ಮಾಡಬೇಕು ಎಂದು ಶಾಸಕ ಡಾ| ಉಮೇಶ ಜಾಧವ ಹೇಳಿದರು. ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ 2017-18ನೇ ಸಾಲಿನ ಕೃಷಿ ಅಭಿಯಾನ ಯೋಜನೆಯಡಿ ಇಲಾಖೆಗಳ ನಡಿಗೆ ರೈತರ ಮನೆ ಕಡೆಗೆ ಕಾರ್ಯಕ್ರಮದಲ್ಲಿ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ರೈತರು ಯೋಜನೆಗಳ ಸದುಪಯೊಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ ಮಾತನಾಡಿ, ಜನಪ್ರತಿನಿಧಿಗಳ ಖುಷಿಗಾಗಿ, ಕಾಟಾಚಾರಕ್ಕೆ ಕಾರ್ಯಕ್ರಮ ಆಯೋಜನೆ ಮಾಡದೆ, ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಆಯೋಜಿಸಬೇಕು ಎಂದು ಹೇಳಿದರು. 

ಕೃಷಿ ಅ ಧಿಕಾರಿ ಜಾಲಿಂದರ ಗುಂಡಪ್ಪ ಮಾತನಾಡಿದರು. ಕೃಷಿ ವಿಜ್ಞಾನಿ ರಾಚಪ್ಪ ಹಾವೇರಿ ರೈತರೊಂದಿಗೆ ಸಂವಾದ ನಡೆಸಿದರು. ತಾಪಂ ಸದಸ್ಯೆ ರತ್ನಮ್ಮ ಗುತ್ತೇದಾರ, ವಂದನಾ ಹಣಮಂತ, ರೇವಣಸಿದ್ದಪ್ಪ ಮಡಕಿ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ಸಲಗೂರ, ಪಶು ವೈದ್ಯಾಧಿಕಾರಿ ಅಣ್ಣಾರಾವ ಪಾಟೀಲ, ಕೃಷಿ ಅ ಧಿಕಾರಿ ರುಚಿ ಕೆಂಗಾಪುರ, ಬಸವರಾಜ, ನಾಗರಾಜ ಸಜ್ಜನ, ನಾಗೇಶ ಟೆಂಗಳಿಕರ್‌, ಶರಣು ವಚ್ಚಾ, ಅನೀಲ ರಾಠೊಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next