Advertisement

ಕರೆಂಟ್‌ ಬಿಲ್‌ ಕೊಡಬೇಡಿ; ಜೂನ್‌ನಿಂದ ಕಟ್ಟುವುದಿಲ್ಲ: ಗ್ರಾಹಕನ ಸೂಚನೆ ವೈರಲ್‌

12:23 AM May 18, 2023 | Team Udayavani |

ಉಡುಪಿ: ಅಧಿಕಾರಕ್ಕೆ ಬಂದರೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಪಕ್ಷ ಹೇಳಿದ್ದು, ಅದರಂತೆ ಈ ಬಾರಿಯ ಚುನಾವಣೆಯಲ್ಲಿ ಬಹುಮತ ಲಭಿಸಿದೆ. ವಿವಿಧೆಡೆ ನಾವು ವಿದ್ಯುತ್‌ ಪಾವತಿಸು ವುದಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿರುವ ನಡುವೆಯೇ ಉಡುಪಿಯ ವಾಸುದೇವ ಭಟ್‌ ಪೆರಂಪಳ್ಳಿ ಅವರು ವಿದ್ಯುತ್‌ ಮೀಟರ್‌ ಬೋರ್ಡ್‌ನ ಕೆಳಗೆ ಬರೆದು ಹಚ್ಚಿರುವ ಪತ್ರವೊಂದು ವೈರಲ್‌ ಆಗಿದೆ.

Advertisement

“ಮೆಸ್ಕಾಂನವರೇ, ಕ್ಷಮಿಸಿ ಜೂನ್‌ ತಿಂಗಳಿನಿಂದ ನಮಗೆ ಕರೆಂಟ್‌ ಬಿಲ್‌ ಕೊಡಬೇಡಿ. ನಾವು ಬಿಲ್‌ ಕಟ್ಟಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ತನ್ನ ನೇತೃತ್ವದ ಸರಕಾರ ಬಂದರೆ ಹಲವಾರು ಉಚಿತ ಯೋಜನೆಗಳನ್ನು ನೀಡುವುದಾಗಿ ಘೋಷಿಸಿತ್ತು. ಜೂನ್‌ನಿಂದಲೇ ಉಚಿತ ವಿದ್ಯುತ್‌ ಕೊಡುವ ಯೋಜನೆ ಘೋಷಣೆಯಾಗಿದೆ. ತಾನು ಸೇರಿದಂತೆ ಯಾರೂ ಕೂಡ ವಿದ್ಯುತ್‌ ಬಿಲ್‌ ಪಾವತಿಸಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಶೇ. 95 ಜನತೆ ಇದರ ಲಾಭ ಪಡೆಯಬಹುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಶೇಕಡಾ 95ರ ಒಳಗೆ ನಾನು ಕೂಡ ಬರುತ್ತೇನೆ. ನಾನು ಕೂಡ ಒಬ್ಬ ಫ‌ಲಾನುಭವಿ ಎಂಬುದು ದೃಢವಾಗಿರುವುದರಿಂದ ಇನ್ನು ನಾನು ಬಿಲ್‌ ಮೊತ್ತ ಪಾವತಿಸಲಾರೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಸ್ಕಾಂ ಅಧೀಕ್ಷಕರು, ವಿದ್ಯುತ್‌ ಬಿಲ್‌ ಪಾವತಿಸಲು ನಿರಾಕರಿಸಿರುವ ಬಗ್ಗೆ ನಮಗೆ ಇದುವರೆಗೂ ಯಾವುದೇ ದೂರುಗಳು ಬಂದಿಲ್ಲ. ಸದ್ಯಕ್ಕೆ ಬಿಲ್‌ಗ‌ಳು ಪಾವತಿಯಾಗುತ್ತಿವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next