Advertisement

ಗಾಳ ಹಾಕಲ್ಲ-ದಡಕ್ಕೆ ಬಂದ ಮೀನು ಹಿಡಿಯದೇ ಬಿಡೊಲ್ಲ: ಆಯನೂರು

01:00 AM Jan 20, 2019 | |

ಶಿವಮೊಗ್ಗ: ನಾವು ಗಾಳ ಹಾಕಿ ಮೀನು ಹಿಡಿಯುತ್ತಿಲ್ಲ. ದಡಕ್ಕೆ ಬಂದ ಮೀನುಗಳನ್ನೂ ಹಿಡಿಯದೆ ಸುಮ್ಮನೆ ಬಿಡೋಕೆ ಸಾಧ್ಯವೇ. ಬಿಜೆಪಿ ಮಾಡ್ತಿರೋದು ರಾಜಕಾರಣನೇ ಹೊರತು ಮತ್ತೇನಲ್ಲ ಎಂದು ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು. 

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಗಡಿ ದಾಟಿ ಬಂದರೆ ನಾವು ಸುಮ್ಮನೆ ಕೂರುವುದಿಲ್ಲ. ನಮಗೂ ಕಬಡ್ಡಿ ಆಟ ಗೊತ್ತು. ಗೆರೆ ದಾಟಿ ಬಂದವರನ್ನು ಕ್ಯಾಚ್‌ ಹಿಡಿಯುತ್ತೇವೆ. ಅವರ ಪಕ್ಷದ ಆಂತರಿಕ ಕಲಹಕ್ಕೆ ಬಿಜೆಪಿಯಾಗಲಿ, ಯಡಿಯೂರಪ್ಪರವರಾಗಲಿ ಕಾರಣರಲ್ಲ. ತಾಂತ್ರಿಕವಾಗಿ ಕಾಂಗ್ರೆಸ್‌, ಜೆಡಿಎಸ್‌ ಅಧಿಕಾರದಲ್ಲಿವೆಯಾದರೂ ಅದು ರಿಜೆಕ್ಟೆಡ್‌ ಗೂಡ್ಸ್‌ (ತಿರಸ್ಕೃತ ವಸ್ತುಗಳು) ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next