Advertisement

ಯಾರಲ್ಲೂ ಮಲ ಹೊರುವ ಕೆಲಸ ಮಾಡಿಸ್ಬೇಡಿ: ಕೋರ್ಟ್‌

03:45 AM Jul 16, 2017 | Team Udayavani |

ಚೆನ್ನೈ: ಯಾವುದೇ ವ್ಯಕ್ತಿಯನ್ನೂ ಮಲ ಹೊರುವ ಕೆಲಸಕ್ಕೆ ನಿಯೋಜಿಸಬಾರದು ಎಂದು ಕೇಂದ್ರ ಹಾಗೂ ತಮಿಳುನಾಡು ಸರಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಶನಿವಾರ ಸ್ಪಷ್ಟ ನಿರ್ದೇಶನ ನೀಡಿದೆ. 

Advertisement

ಮಲ ಹೊರುವ ಪದ್ಧತಿಯು ಮಾನವ ಹಕ್ಕುಗಳ ಉಲ್ಲಂಘನೆ ಯಾಗಿದೆ. ಸಂವಿಧಾನದ ಅನ್ವಯ ಘನತೆಯಿಂದ ಬದುಕುವ ಹಕ್ಕನ್ನೂ ಕಿತ್ತುಕೊಂಡಂತೆ. ಯಾವುದೇ ಕಾರಣಕ್ಕೂ ಇಂತಹ ಕೆಲಸಕ್ಕೆ ಯಾವುದೇ ವ್ಯಕ್ತಿಯನ್ನು ನೇಮಿಸಬೇಡಿ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ನ್ಯಾ. ಎಂ. ಸುಂದರ್‌ ನೇತೃತ್ವದ ಪೀಠ ಸೂಚಿಸಿದೆ. ಚೆನ್ನೈನ ಸಫಾಯಿ ಕರ್ಮಚಾರಿ ಆಂದೋಲನ್‌ ಎಂಬ ಸಂಘಟನೆ ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ವೇಳೆ ಈ ನಿರ್ದೇಶನ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next