Advertisement

ರಾಮದಾಸ್‌ಗೆ ಟಿಕೆಟ್‌ ಕೊಡಬೇಡಿ: ಗೋ.ಮಧುಸೂದನ್‌ ಪತ್ರ

07:05 AM Apr 12, 2018 | Team Udayavani |

ಮೈಸೂರು: ಕಳಂಕಿತ ಎಸ್‌.ಎ.ರಾಮದಾಸ್‌ಗೆ ಕೆ.ಆರ್‌.ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ನೀಡದಂತೆ ಬಿಜೆಪಿ ಮುಖಂಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ.ಮಧುಸೂದನ್‌ ಒತ್ತಾಯಿಸಿದ್ದಾರೆ.

Advertisement

ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪಅವರಿಗೆ ಪತ್ರ ಬರೆದಿದ್ದಾರೆ.ರಾಮದಾಸ್‌ ವೈಯಕ್ತಿಕ ಚಾರಿತ್ರ್ಯಹರಣ, ಭೂ ಹಗರಣ ಆರೋಪಗಳ ಕಳಂಕ ಹೊತ್ತಿದ್ದು, ಇಂತಹ ಕಳಂಕಿತರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಬಾರದು. ಕಳಂಕಿತ ಅಭ್ಯರ್ಥಿಗೆ ಬಿಜೆಪಿ ಟಿಕೆಟ್‌ ನೀಡುವುದರಿಂದ ಪಕ್ಷಕ್ಕೆ ಹಿನ್ನಡೆಯಾಗುವುದಲ್ಲದೆ, ಅನ್ಯ ಪಕ್ಷದ ಕಳಂಕಿತರ ವಿರುದಟಛಿ ಮಾತನಾಡುವ ನೈತಿಕತೆಯನ್ನು ಕಳೆದುಕೊಳ್ಳಲಿದೆ. ಹೀಗಾಗಿ, ರಾಮದಾಸ್‌ಗೆ ಟಿಕೆಟ್‌ ಕೊಡದಂತೆ ಒತ್ತಾಯಿಸಿ, ಯಡಿಯೂರಪ್ಪಗೆ ಇ-ಮೇಲ್‌ ಹಾಗೂ ವಾಟ್ಸಪ್‌ ಮೂಲಕ ಮನವಿ ಪತ್ರ ರವಾನಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next