Advertisement

ಮತಾಂತರ ನಿಷೇಧ ಕಾಯಿದೆ ತಂದು ದೇಶ ವಿಭಜನೆ ಮಾಡಬೇಡಿ: ಕೆ.ಜೆ.ಚಾರ್ಜ್

11:37 AM Dec 13, 2021 | Team Udayavani |

ಸುವರ್ಣಸೌಧ (ಬೆಳಗಾವಿ): ರಾಜಕೀಯದ ದುರುದ್ದೇಶದಿಂದ ಮತಾಂತರ ನಿಷೇಧ ಕಾಯಿದೆ ತರಲು ಹೊರಟಿದ್ದಾರೆ.‌ ಸಿಎಂ ಹಾಗೂ ಅವರ ಪಕ್ಷದವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ, ಇಂಥಹ ಕಾಯ್ದೆ ತಂದು ದೇಶ ವಿಭಜನೆ ಮಾಡಲು ಹೋಗಬೇಡಿ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಕೆ.ಜೆ.ಚಾರ್ಜ್ ಹೇಳಿದರು.

Advertisement

ಬಲವಂತವಾಗಿ ಮತಾಂತರ ಮಾಡಿದರೆ ನಮ್ಮ ವಿರೋಧವಿದೆ. ಈ ಕಾನೂನು ತರುವ ಮೂಲಕ ಕೆಲವರಿಗೆ ನೈತಿಕ ಪೊಲೀಸ್‌ ಗಿರಿಗೆ ಅವಕಾಶ ಮಾಡಿಕೊಟ್ಟಂತಾಗಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಮುಂದಿನ ದಿನಗಳಲ್ಲಿ ಲವ್ ಜಿಹಾದ್ ನಿಷೇಧ ಕಾಯಿದೆಯನ್ನೂ ತರುತ್ತೇವೆ: ಸಚಿವ ಸುನೀಲ್ ಕುಮಾರ್

ಹಿಂದೂ ಧರ್ಮವಾಗಲಿ ಅಥಾವ ಬೇರೆ‌ ಧರ್ಮವಾಗಲಿ ಶಕ್ತಿಯುತವಾಗಿದೆ. ಮೊಘಲರು, ಡಚ್ಚರು, ಪೋರ್ಚುಗೀಸರು ದೇಶಕ್ಕೆ ಬಂದು ಹೋದರೂ ಹಿಂದೂ ಧರ್ಮೀಯರ ಸಂಖ್ಯೆ ಹೆಚ್ಚಿದೆ. ಕ್ರೈಸ್ತ ಸಮುದಾಯದ ಜನಸಂಖ್ಯೆ ಮೊದಲಿಗಿಂತ ಕಡಿಮೆಯಿದೆ ಎಂದು ಚಾರ್ಜ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next