Advertisement

ನಿಯಂತ್ರಣಕ್ಕೆ ಬಾರದ ಕಾಳ್ಗಿಚ್ಚು

11:50 AM Apr 12, 2017 | Harsha Rao |

ಉಪ್ಪಳ: ಪೈವಳಿಕೆ ಸಮೀಪದ ಕಾಯರ್‌ಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಪ್ರಮಾಣದ ಕಾಳ್ಗಿಚ್ಚು ಕಂಡುಬಂದಿದ್ದು, ಶಮನಗೊಳಿಸಲಾಗದೆ ತೀವ್ರ ಆತಂಕ ಉಂಟಾಗಿದೆ. 

Advertisement

ಜನವಸತಿ ರಹಿತ ಮುಳಿಗುಡ್ಡೆಗಳಿಂದ ಆವೃತವಾದ ಈ ಪ್ರದೇಶದಲ್ಲಿ ಮೂರು ದಿನಗಳಿಂದ ನಿರಂತರ ಕಾಳ್ಗಿಚ್ಚು ವ್ಯಾಪಿಸಿದ್ದು, ಎಕ್ರೆಗಟ್ಟಲೆ ಪ್ರದೇಶ ಆಹುತಿಯಾಗಿದೆ. ಈ ಪ್ರದೇಶದ ಸನಿಹದಲ್ಲೇ ಹತ್ತು ಕುಟುಂಬಗಳು ವಾಸಿಸುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರು ನಿರಂತರ ಕಾಳ್ಗಿಚ್ಚು ಉಪಶಮನಕ್ಕೆ ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಪ್ರದೇಶಕ್ಕೆ ರಸ್ತೆ ಸೌಕರ್ಯ ಇಲ್ಲದೇ ಇರುವುದರಿಂದ ಅಗ್ನಿ ಶಾಮಕ ವಾಹನ ತೆರಳಲು ಅಡಚಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next