Advertisement

ಮಕ್ಕಳನ್ನು ತುಲನೆ ಮಾಡದಿರಿ: ಡಾ|ಪಿ.ವಿ. ಭಂಡಾರಿ

07:40 AM Sep 12, 2017 | Team Udayavani |

ಹೆಬ್ರಿ: ತನ್ನ ಹಿರಿಯ ಮಗ ತುಂಬಾ ಹುಷಾರ್‌ ಇದ್ದಾನೆ.ಇನ್ನೊಬ್ಬ ಪ್ರಯೋಜನವಿಲ್ಲ ಎಂಬ ತಾರತಮ್ಯವನ್ನು ಮಾಡುವುದರಿಂದ ಮಕ್ಕಳ ಮೇಲೆ ಪರಿಣಾಮ ಬೀರಿ ಆತ್ಮಹತ್ಯೆಯಂತಹ ಘೋರ ಕೃತ್ಯಕ್ಕೆ ಮುಂದಾಗುತ್ತಾರೆ, ತಮ್ಮ ಮಕ್ಕಳನ್ನು ಇತರ ಮಕ್ಕಳ ಜತೆ ತುಲನೆ ಮಾಡಿ ನೋಡಬೇಡಿ.  ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಮಾನಸಿಕ ತಜ್ಞ ಡಾ| ಪಿ.ವಿ. ಭಂಡಾರಿ ಹೇಳಿದರು.

Advertisement

ಅವರು ಸೆ. 10ರಂದು ಹೆಬ್ರಿ ಅನಂತಪದ್ಮನಾಭ ಸನ್ನಿಧಿಯಲ್ಲಿ ಹೆಬ್ರಿ ಜೇಸಿಐ ಆಶ್ರಯದಲ್ಲಿ ನಡೆದ ಅನಂತ ಸಂಭ್ರಮ-2017 ಜೇಸಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಹೆಬ್ರಿ ಜೇಸಿಐ ಸಾಧನೆ: ಜೇಸಿಐ ಅಧ್ಯಕ್ಷ ಪ್ರಶಾಂತ ಪೈ ಅವರ ನೇತೃತ್ವದಲ್ಲಿ ದಿನಂಪ್ರತಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುವುದರೊಂದಿಗೆ  ಜೇಸಿಐ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಹೆಬ್ರಿ ಜೇಸಿಐ ಸೇವಾ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಜೇಸಿಐನ ಪೂರ್ವಾಧ್ಯಕ್ಷ ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಗಾನಗಾರುಡಿಗ ಬಿರುದಾಂಕಿತ ಭಾಗವತ ಗಣೇಶ್‌ ಹೆಬ್ರಿ ಅವರನ್ನು ಸಮ್ಮಾನಿಸಲಾಯಿತು.

ಸಮಾರಂಭದಲ್ಲಿ ಪ್ರಾಂತ್ಯ ಬಿ ವಲಯ 15ರ ವಲಯ ಉಪಾಧ್ಯಕ್ಷ ಜೆಎಫ್‌ಎಂ ಸರ್ವಜ್ಞ ತಂತ್ರಿ, ಪೂರ್ವ ವಲಯ ಉಪಾಧ್ಯಕ್ಷ ಡಾ| ಅನಿತ್‌ ಕುಮಾರ್‌ ಶೃಂಗೇರಿ, ಚಲನಚಿತ್ರ ಮತ್ತು ಕಿರುತೆರೆ ನಟಿ ರಕ್ಷಾ ಶೆಣೈ, ಹೆಬ್ರಿ ಜೇಸಿಐ ಪೂರ್ವಾಧ್ಯಕ್ಷ ವಾದಿರಾಜ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಪ್ರಸಾದ್‌ ಶೆಟ್ಟಿ, ಯುವಜೇಸಿ ಅಧ್ಯಕ್ಷ ದೀಕ್ಷಿತ್‌, ಜೇಸಿರೆಟ್‌ ಅಧ್ಯಕ್ಷೆ ರಂಜಿತಾ ಆರ್‌. ಪ್ರಭು, ಉದಯ ಸೇರಿಗಾರ್‌, ಪ್ರಶಾಂತ್‌ ಆಚಾರ್ಯ, ಹರಿಪ್ರಸಾದ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ ಹೆಬ್ರಿ ಜೇಸಿಐ ಅಧ್ಯಕ್ಷ ಎಂ. ಪ್ರಶಾಂತ್‌ ಪೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ದರು. ಕಾರ್ಯದರ್ಶಿ ನಾಗೇಂದ್ರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next