Advertisement

ವಸತಿ ಶಾಲೆಗೆ ಕೋವಿಡ್‌ ಸೋಂಕಿತರನ್ನು ತರಬೇಡಿ

01:25 PM Apr 29, 2021 | Adarsha |

ವಿಜಯಪುರ: ಪಟ್ಟಣ ಸಮೀಪದದೇವನಾಯಕನಹಳ್ಳಿ ಗ್ರಾಮದ ಹತ್ತಿರಇರುವ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ಕೋವಿಡ್‌ ಸೋಂಕಿತರನ್ನುಕ್ವಾರಂಟೈನ್‌ ಮಾಡುವುದಕ್ಕೆ ಅಧಿಕಾರಿಗಳತಂಡ ಭೇಟಿ ನೀಡಿ ಪರಿಶೀಲಿಸಿತು.

Advertisement

ಸೋಮತ್ತನಹಳ್ಳಿ ಹಾಗೂದೇವನಾಯಕನಹಳ್ಳಿ ಗ್ರಾಮಸ್ಥರುಮುರಾರ್ಜಿ ದೇಸಾಯಿ ಶಾಲೆಗೆ ಹೋಗುವರಸ್ತೆಯನ್ನು ಹಳ್ಳ ತೆಗೆದು ಯಾವುದೇಗಾಡಿಗಳು ಓಡಾಡದಂತೆ ಗುಂಡಿಗಳನ್ನುತೆಗೆದು ಶಾಲೆಯ ಮುಂಭಾಗ ವಿರೋಧವ್ಯಕ್ತ ಪಡಿಸಿದರು.ತಾಪಂ ಸದಸ್ಯ ಮಂಜುನಾಥ್‌ ಮಾತನಾಡಿ, 2 ಗ್ರಾಮಗಳ ಹತ್ತಿರ ವಸತಿಶಾಲೆ ನಿರ್ಮಾಣವಾಗಿ ಸುಮಾರು 2ವರ್ಷ ಕಳೆದರೂ ರಸ್ತೆ ಇಲ್ಲದಂತಾಗಿದೆ.

ಎಷ್ಟು ಬಾರಿ ಅಧಿಕಾರಿಗಳ ಗಮನಕ್ಕೆತಂದರೂ ಪ್ರಯೋಜನವಾಗಿಲ್ಲ. ಈಗಕೋವಿಡ್‌ 2ನೇ ಅಲೆ ಹಿನ್ನೆಲೆ ವಸತಿ ಶಾಲೆಗೆಸೋಂಕಿತರನ್ನು ತಂದು ಇಡೀ ಗ್ರಾಮಕ್ಕೆಹಬ್ಬಿಸಲು ಮುಂದಾಗಿದ್ದಾರೆ. ಈ 2ಗ್ರಾಮಗಳಲ್ಲಿ ರೈತಾಪಿ ವರ್ಗದವರಿದ್ದು,ಕ್ವಾರಂಟೈನ್‌ ಮಾಡಿದರೆತೊಂದರೆಯಾಗಲಿದೆ ಎಂದರು. ಗ್ರಾಪಂಸದಸ್ಯರಾದ ದೇವರಾಜ್‌, ಕಮಲೇಶ್‌,ಮಾಜಿ ಸದಸ್ಯ ನಾಗರಾಜ್‌ ಹಾಗೂದೇವನಾಯಕನಹಳ್ಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next