Advertisement

ಹೋಂ ಕ್ವಾರಂಟೈನ್‌ ತಪ್ಪಿದರೆ ಜೋಕೆ

05:50 PM Apr 17, 2020 | Suhan S |

ಹಾವೇರಿ: ವಿದೇಶದಿಂದ ಬಂದವರು ಹಾಗೂ ಅವರ ಮನೆಯವರು ಹೋಂ ಕ್ವಾರಂಟೈನ್‌ ಕಡ್ಡಾಯವಾಗಿ ಅನುಸರಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಅಂಥವರನ್ನು ಸರ್ಕಾರಿ ಏಕಾಂತ ವಾಸಕ್ಕೆ ವರ್ಗಾಯಿಸಲಾಗುವುದು ಎಂದು ಜಿಲ್ಲಾಧಿಕಾರಿ

Advertisement

ಕೃಷ್ಣ ಭಾಜಪೇಯಿ ಎಚ್ಚರಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌-19ರ ಶುಶ್ರೂಷಾ ಸೇವೆಯ ಉದ್ದೇಶ ಮತ್ತು ನಿಯಂತ್ರಣ ಕಾರ್ಯಗಳನ್ನು ಹೊರತುಪಡಿಸಿ ಐದು ವ್ಯಕ್ತಿಗಿಳಿಗಿಂತ ಹೆಚ್ಚಿನ ಜನರ ಒಗ್ಗೂಡುವಿಕೆ ನಿಷೇಧಿಸಲಾಗಿದೆ. ಎಲ್ಲ ಧರ್ಮಗಳ ಪ್ರಾರ್ಥನಾ ಒಗ್ಗೂಡುವಿಕೆ ಮತ್ತು ಹಬ್ಬಗಳ ಒಗ್ಗೂಡುವಿಕೆಯನ್ನು ನಿಷೇ ಧಿಸಲಾಗಿದೆ. ಖಾಸಗಿ ವಾಹನಗಳು ಅಗತ್ಯ ವಸ್ತುಗಳನ್ನು ಸಾಗಿಸಲು ಮಾತ್ರ ಬಳಕೆ ಮಾಡಬೇಕು. ವೈದ್ಯಕೀಯ ತರ್ತು ಮತ್ತು ಅನಿವಾರ್ಯ ಸಂದರ್ಭ ಹೊರತುಪಡಿಸಿ ನೆರೆ ರಾಜ್ಯದಿಂದ ಬರುವ ಪ್ರಯಾಣಿಕರ ವಾಹನಗಳ ಚಲನ-ವಲನ ನಿಲ್ಲಿಸಲಾಗಿದೆ. ಕಾರ್ಖಾನೆಗಳ ಯಾವೊಬ್ಬ ಕೆಲಸಗಾರರನ್ನು ತೆಗೆದು ಹಾಕುವಂತಿಲ್ಲ ಹಾಗೂ ಕೆಲಸಗಾರರಿಗೆ ಈ ದಿನಗಳಲ್ಲಿ ವೇತನ ಸಹಿತ ರಜೆ ಮಂಜೂರು ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next