Advertisement

ಗಾಳಿ ಸುದ್ದಿಗಳನ್ನು ನಂಬುವುದು ಬೇಡ : ಚೆಲುವರಾಯಸ್ವಾಮಿ

02:31 PM Nov 11, 2019 | Suhan S |

ಬೆಂಗಳೂರು: ಗಾಳಿ ಸುದ್ದಿಗಳನ್ನು ಮಾಡುವುದು ಬೇಡ ಚಹಾ,ತಿಂಡಿ ತಿಂದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಯೋಗೇಶ್ವರ್ ಜೊತೆ ಸ್ನೇಹ ಇರೋದು ನಿಜ ನಾವು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಕಾಫಿತಿಂಡಿ ತಿಂದ ಮಾತ್ರಕ್ಕೆ ಪಕ್ಷ ಬಿಟ್ಟು ಹೋಗುತ್ತಾರೆ ಅನ್ನುವಂತಿಲ್ಲ ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವವರು ಬರಲಿ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

Advertisement

ಚೆಲುವರಾಯಸ್ವಾಮಿ ಬಿಜೆಪಿಗೆ ಹೋಗ್ತಾರೆಂಬ  ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ  ಚೆಲುವರಾಯಸ್ವಾಮಿ, ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಜೊತೆ ಮೈತ್ರಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.

ಹೈಕಮಾಂಡ್ ಲೆವೆಲ್ ನಲ್ಲಿ ಚರ್ಚೆ ಆಗಬೇಕು ಮತ್ತೆ ಜೆಡಿಎಸ್ ಜೊತೆ ಹೋದರೆ ನಮ್ಮ‌ಅಭ್ಯಂತರವಿಲ್ಲ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧವಾಗಿರುತ್ತೇವೆ. ನನಗೆ ವೈಯುಕ್ತಿಕವಾಗಿ ಯಾವುದೇ ಸಮಸ್ಯೆಯಿಲ್ಲ ಮಾಜಿ ಸಚಿವ ಚೆಲುವರಾಯಸ್ವಾಮಿ  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next