Advertisement
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕುವೆಂಪು ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿದ್ದು, ಆದರ್ಶ ಜೀವನಕ್ಕೆ ಅವಶ್ಯಕವಾಗಿದೆ ಎಂದ ಅವರು, ಕುವೆಂಪು ರಚಿಸಿರುವ ಜ್ಞಾನಪೀಠ ಪುರಸ್ಕೃತ ಕೃತಿಯಾದ ಶ್ರೀ ರಾಮಾಯಣ ದರ್ಶನಂ ಶ್ರೇಷ್ಠ ಕೃತಿಯಾಗಿದೆ ಎಂದರು.
Related Articles
ಅನಪುರ, ಜಿಪಂ ಸಿಇಒ ಡಾ| ಅವಿನಾಶ್ ಮೆನನ್ ರಾಜೇಂದ್ರನ್, ಅಪರ ಜಿಲ್ಲಾಧಿ ಕಾರಿ ಡಾ| ಕೆ. ಜಗದೀಶ್ ನಾಯ್ಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಇತರರು ಇದ್ದರು. ನಗರಸಭೆಯ ಪೌರಾಯುಕ್ತ ಸಂಗಪ್ಪ ಉಪಾಸೆ ಸ್ವಾಗತಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು
Advertisement
ವಿಶ್ವಮಾನವ ಸಂದೇಶ ಅಳವಡಿಸಿಕೊಳ್ಳಿ: ಆಲ್ದಾಳಶಹಾಪುರ: ಜಾತಿ-ಧರ್ಮಗಳ ವೈಭವೀಕರಣದ ಇಂದಿನ ಪ್ರಸ್ತುತ ಸಂದರ್ಭದಲ್ಲಿ ಜಗತ್ತಿಗೆ ವಿಶ್ವಮಾನವ ಸಂದೇಶ
ನೀಡಿದ ರಾಷ್ಟ್ರಕವಿ ಕುವೆಂಪು ಅವರ ಮಾನವ ಕುಲಂ ಒಂದೇ ವಲಂ ಎಂಬುದನ್ನು ಯುವ ಪೀಳಿಗೆ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ರಂಗಕರ್ಮಿ, ಸಾಹಿತಿ ಎಲ್.ಬಿ.ಕೆ. ಆಲ್ದಾಳ ಹೇಳಿದರು. ನಗರದ ಕೊಲ್ಲೂರ ಟಾವರ್ದಲ್ಲಿರುವ ಟರ್ನಿಂಗ್ ಪಾಯಿಂಟ್ ಕಂಪ್ಯೂಟರ್ ಕಿಯೋನಿಕ್ಸ್ ಫ್ರಾಂಚೈಸಿ ಕೇಂದ್ರದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ 113 ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ, ಯುವ ಸಮೂಹ ರಾಷ್ಟ್ರಕವಿ ಕುವೆಂಪು ಅವರ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮುಂಚಿತವಾಗಿ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಮುಖ್ಯಸ್ಥ ರವಿ ಹಿರೇಮಠ, ವ್ಯವಸ್ಥಾಪಕಿ ಸುನೀತಾ ಹಿರೇಮಠ, ಜಯಶ್ರೀ ಎಂ, ಸುರೇಶ, ಭೀಮಾಶಂಕರ, ಮಲ್ಲಿಕಾರ್ಜುನ, ರಶ್ಮಿ ಪತ್ತಾರ ಹಾಗೂ ವಿದ್ಯಾರ್ಥಿಗಳು ಇದ್ದರು. ಕನ್ನಡ ನಾಡಿಗೆ ಕುವೆಂಪು ಕೊಡುಗೆ ಅಪಾಋ
ಸೈದಾಪುರ: ರಾಷ್ಟ್ರಕವಿ ಕುವೆಂಪು ಕೊಡುಗೆ ಅಪಾರವಾಗಿದೆ ಎಂದು ಸೈದಾಪುರ ಕ್ಲಸ್ಟರ್ನ ಸಿಆರ್ಪಿ ಲಿಂಗನಗೌಡ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶ್ವಮಾನವ ಕುವೆಂಪು ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕನ್ನಡ ನಾಡಿಗೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಗರಿಮೆ ಕುವೆಂಪು ಅವರಿಗೆ ಸಲ್ಲುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಬಹುಪಾಲ
ಸಮಯ ಪುಸ್ತಕ, ಓದು ಬರಹಕ್ಕೆ ಮೀಸಲಾಗಿಟ್ಟು ಸಾಕಷ್ಟು ಕೃತಿ, ಕಥೆ, ಕಾದಂಬರಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕ ಕೂಡ್ಮೂರು, ಮುಖ್ಯಗುರು ನರಸಪ್ಪ ನಾರಾಯಣೋರ, ರಾಘವೇಂದ್ರ ನಾಯಕ, ಚನ್ನಬಸವ ನಾಯಕ, ಆಂಜನೇಯ, ಸುವರ್ಣ, ದೇವೇಂದ್ರಪ್ಪ, ರಿಯಾನ ಬೇಗಂ, ಮಹ್ಮದ ಮಹಿಬೂಬ, ಕಾಶಮ್ಮ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು. ಶಿಕ್ಷಕಿ ಸುವರ್ಣ ಸ್ವಾಗತಿಸಿದರು. ಶಿಕ್ಷಕ ವೇಂದ್ರಪ್ಪ ನಾಯ್ಕಲ್ ನಿರೂಪಿಸಿ, ವಂದಿಸಿದರು. ವಡಗೇರಾ
ವಡಗೇರಾ: ರಾಷ್ಟ್ರ ಕವಿ ಕುವೆಂಪು ಅವರ ಚಿಂತನೆ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಾಧ್ಯ ಎಂದು ಮುಖ್ಯ ಗುರು ಸುರೇಶ ಕರಣಗಿ ಹೇಳಿದರು. ಪಟ್ಟಣದ ಸ್ವಾಮಿ ವಿವೇಕಾಂದ ಪ್ರೌಢಶಾಲೆಯಲ್ಲಿ ಕುವೆಂಪು ಅವರ ಜನ್ಮದಿನ ಅಂಗವಾಗಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕನ್ನಡದ ಕಂಪನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಕನ್ನಡ ಭಾಷೆಗೆಯಲ್ಲಿ ಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮಾಹನ್ ಚೇತನ ಎಂದು ಅವರು ಹೇಳಿದರು. ಶಿಕ್ಷಕರಾದ ಸೈದಪ್ಪ ಕೊನಹಳ್ಳಿ, ಮಲ್ಲಣ್ಣ ಪಾಟೀಲ್, ಕಾಜಾಪೀರ, ವಿರೇಶ ಶಿರಸಿ, ಗಂಗಮ್ಮ, ಜ್ಯೋತಿ ಹಾಗೂ ಇತರರು ಇದ್ದರು. ಮಾನವೀಯತೆ ಮೆರೆದ ಶಾಸಕ: ವಿಶ್ವಮಾನವ ದಿನಾಚರಣೆ ಕಾರ್ಯಕ್ರಮಕ್ಕೆ ಜನರು ಬಾರದ ಹಿನ್ನೆಲೆಯಲ್ಲಿ ವಿವಿಧ ಶಾಲೆಯ ಮಕ್ಕಳನ್ನು ಕರೆಸಲಾಗಿತ್ತು. ಈ ಸಂದರ್ಭದಲ್ಲಿ ನಿಶಕ್ತಿಯಿಂದ ಬಳಲುತ್ತಿದ್ದ ಹುಡುಗನೊಬ್ಬ ಮೂರ್ಛೆಗೊಂಡು ಕೆಳಗೆ ಬಿದ್ದಾಗ, ಸ್ವತಃ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಅವರು ಭಾಷಣ ನಿಲ್ಲಿಸಿ ಹುಡುಗನ ಹತ್ತಿರ ಹೋಗಿ ಪರೀಕ್ಷಿಸಿ ಮಾನವೀಯತೆ ಮೆರೆದರು.