Advertisement

ವಿಷ್ಣುವರ್ಧನ್‌ ಸ್ಮಾರಕ ವಿಚಾರದಲ್ಲಿ ಗೊಂದಲ ಬೇಡ;ನಾನು ಬದ್ಧನಿದ್ದೇನೆ

12:05 PM Nov 29, 2018 | |

ಬೆಂಗಳೂರು: ಸಾಹಸಸಿಂಹ ದಿವಂಗತ ಡಾ.ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣ ಕುರಿತು ಚರ್ಚೆ ತಾರಕ ಮುಟ್ಟಿದ ಬೆನ್ನಲ್ಲೇ  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಾನು ಬದ್ಧನಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ. 

Advertisement

ವಿಷ್ಣುವರ್ಧನ್ ಅವರ ಸ್ಮಾರಕ ಕುರಿತ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಡಾ ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ರಂತಹ ಮಹನೀಯರನ್ನು ಸ್ಮರಿಸುವ ವಿಚಾರದಲ್ಲಿ ನಾನು ಬದ್ಧನಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಬರೆದಿದ್ದಾರೆ. 

ಸರ್ಕಾರ ಡಿಸೆಂಬರ್‌ 31ರ ಒಳಗೆ ವಿಷ್ಣು ಸ್ಮಾರಕ ವಿವಾದವನ್ನು ಬಗೆಹರಿಸಬೇಕು.ಅಲ್ಲಿಯೇ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕಡೆಗಣಿಸಿದರೆ, ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ” ಎಂದು ಅನಿರುದ್ಧ ಎಚ್ಚರಿಸಿದ್ದಾರೆ.

ಭಾರತಿ ವಿಷ್ಣುವರ್ಧನ್‌ ಅವರು, “”ನಮ್ಮ ಯಜಮಾನರ ಸ್ಮಾರಕ ನಿರ್ಮಾಣ ಮಾಡುವುದಾದರೆ, ಮೈಸೂರಲ್ಲಿ ಮಾಡಿ, ಇಲ್ಲವಾದರೆ ಅಭಿಮಾನ್‌ ಸ್ಟುಡಿಯೋದಲ್ಲೇ ಮಾಡಿ. ಸ್ಮಾರಕ ನಿರ್ಮಾಣವಾದರೂ ಸಂತೋಷ, ಆಗದೇ ಇದ್ದರೂ ಸಂತೋಷ.”ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರ ಡಿಸೆಂಬರ್‌ 31ರ ಒಳಗೆ ವಿಷ್ಣು ಸ್ಮಾರಕ ವಿವಾದವನ್ನು ಬಗೆಹರಿಸಬೇಕು.ಅಲ್ಲಿಯೇ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕಡೆಗಣಿಸಿದರೆ, ರಾಜ್ಯಾದ್ಯಂತ ಹೋರಾಟ ಮಾಡುವ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next