Advertisement

ಶಬರಿಮಲೆಯಲ್ಲಿ ಬ್ಯಾರಿಕೇಡ್‌ ಬೇಡ 

06:00 AM Dec 13, 2018 | |

ಕೊಚ್ಚಿ: ಶಬರಿಮಲೆ ದೇಗುಲದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಹಾಕಿರುವ ಬ್ಯಾರಿಕೇಡ್‌ಗಳನ್ನು ತೆಗೆಯುವಂತೆ ಕೇರಳ ಹೈಕೋರ್ಟ್‌ ಆದೇಶಿಸಿದೆ. ರಾತ್ರಿ 11.30 ರ ನಂತರ ಸನ್ನಿ ಧಾನಂಗೆ ಹೋಗುವ ದಾರಿಯನ್ನು ಶರಣಕುಟ್ಟಿ ಎಂಬಲ್ಲಿ ನಿರ್ಬಂಧಿಸಬಾರದು ಎಂದೂ ಕೋರ್ಟ್‌ ಆದೇಶಿಸಿದೆ. ಇದೇ ವೇಳೆ, ಶಬರಿಮಲೆ ದೇಗುಲದಲ್ಲಿ ಯಾತ್ರೆಯ ಕಾರ್ಯಕಲಾಪ ವನ್ನು ಗಮನಿಸಿ ವರದಿ ನೀಡುವುದಕ್ಕಾಗಿ ರಚಿಸಿದ್ದ ಸಮಿತಿ ಸಲ್ಲಿಸಿದ ವರದಿಯನ್ನು ಕೋರ್ಟ್‌ ಪುರಸ್ಕರಿಸಿದೆ.

Advertisement

ಆದರೆ ಪರಿಸ್ಥಿತಿಯ ತೀವ್ರತೆಯನ್ನು ಆಧರಿಸಿ ಪೊಲೀಸರು ಕ್ರಮ ತೆಗೆದುಕೊಳ್ಳಬಹುದು ಮತ್ತು ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಬಹುದಾಗಿದೆ. ಅಗತ್ಯವಿದ್ದಲ್ಲಿ ನಿರ್ಬಂಧ ವಿಧಿಸಬಹುದಾಗಿದೆ ಎಂದು ಕೋರ್ಟ್‌ ಸೂಚನೆ ನೀಡಿದೆ. ಡಿಸೆಂಬರ್‌ 15 ರಿಂದ 30 ರವರೆಗೆ ಅಪರಾಧ ವಿಭಾಗದ ಐಜಿ ಎಸ್‌ ಶ್ರೀಜಿತ್‌ ಪಂಬ ಮತ್ತು ಸನ್ನಿಧಾ ನಮ್‌ ಭದ್ರತೆಯ ಉಸ್ತುವಾರಿ ವಹಿಸಲಿದ್ದು, ನಿಲಕ್ಕಲ್‌, ವಡಶೆÏರಿಕ್ಕರ ಮತ್ತು ಎರುಮೆಲಿಯ ಭದ್ರತೆಯನ್ನು ಗುಪ್ತಚರ ದಳದ ಡಿಐಜಿ ಎಸ್‌ ಸುರೇಂದ್ರನ್‌ ವಹಿಸಿಕೊಳ್ಳಲಿದ್ದಾರೆ ಎಂದು ಡಿಜಿಪಿ ಲೋಕನಾಥ್‌ ಬೆಹರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next