Advertisement

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪಾದಯಾತ್ರೆಗೆ ಡಿಎಂಕೆ ಅಪಹಾಸ್ಯ

05:11 PM Jan 22, 2023 | Team Udayavani |

ಚೆನ್ನೈ : ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ನಿಗದಿತ ರಾಜ್ಯಾದ್ಯಂತ ಪಾದಯಾತ್ರೆಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆಯುತ್ತಿರುವ ಕನ್ಯಾಕುಮಾರಿಯಿಂದ ಕಾಶ್ಮೀರ ಪಾದಯಾತ್ರೆಯ ಪರಿಣಾಮವಾಗಿದೆ ಎಂದು ಆಡಳಿತಾರೂಢ ಡಿಎಂಕೆ ಭಾನುವಾರ ಅಪಹಾಸ್ಯ ಮಾಡಿದೆ.

Advertisement

ಏಪ್ರಿಲ್ 14 ರಿಂದ ದಕ್ಷಿಣ ತಮಿಳುನಾಡಿನ ಕಡಲತೀರದ ದೇವಾಲಯದ ಪಟ್ಟಣವಾದ ತಿರುಚೆಂದೂರ್‌ನಿಂದ ಪ್ರಾರಂಭವಾಗಲಿರುವ ಅಣ್ಣಾಮಲೈ ಅವರ ಉದ್ದೇಶಿತ ಯಾತ್ರೆಯನ್ನು, ಡಿಎಂಕೆ ತಮಿಳು ಮುಖವಾಣಿ ‘ಮುರಸೋಲಿ’ ಈ ಯಾತ್ರೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಪ್ರಭಾವ ಅನ್ನುವುದನ್ನು ತೋರಿಸುತ್ತದೆ ಎಂದು ಹೇಳಿದೆ.

ಯಾರೊಬ್ಬರಿಂದ ಏನನ್ನಾದರೂ ನಕಲಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ತಿರುಚೆಂದೂರು ವಾರ್ಷಿಕ ‘ಸೂರ ಸಂಹಾರಂ’ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಜನಪ್ರಿಯವಾಗಿದೆ ಎಂದು ಹೇಳಿದ ಮುರಸೋಲಿ ದಿನಪತ್ರಿಕೆ ಅಣ್ಣಾಮಲೈ ಅವರನ್ನು ಇಬ್ಬರು ಮಹಿಳೆಯರ ಸಂಭಾಷಣೆಯ ರೂಪದಲ್ಲಿ ಗೇಲಿ ಮಾಡಿದೆ.

ತಮಿಳುನಾಡು ಬಿಜೆಪಿ ಮುಖ್ಯಸ್ಥರು 2024 ರ ಲೋಕಸಭೆ ಚುನಾವಣೆಗೆ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವ ಮೊದಲು ಎಲ್ಲಾ 234 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ.

ಡಾ ಅಂಬೇಡ್ಕರ್ ಜಯಂತಿ ಮತ್ತು ತಮಿಳು ಹೊಸ ವರ್ಷದ ದಿನ ಏಪ್ರಿಲ್ 14 ರಂದು ಯಾತ್ರೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next